Advertisement

ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಕೆ

07:27 PM Mar 23, 2020 | Suhan S |

ರಾಮನಗರ: ಕೋವಿಡ್ 19 ವೈರಸ್‌ ಸೋಂಕು ಹರಡದಂತೆ ಸಮರದ ಸೇನಾನಿಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಕೇಂದ್ರದ ನಾಗರಿಕರು ಚಪ್ಪಾಳೆ, ಜಾಗಟೆ ಭಾರಿಸುವುದರ ಮೂಲಕ ಕೃತಜ್ಞತೆ ಅರ್ಪಿಸಿದರು.

Advertisement

ಪ್ರಧಾನಿ ಮೋದಿ ಅವರ ಆಶಯದಂತೆ ನಗರದ ನಾಗರಿಕರು ಭಾನುವಾರ ಸಂಜೆ 5 ಗಂಟೆಗೆ ಸರಿಯಾಗಿ ತಮ್ಮ ಸಂಬಂಧಿಕರು, ಸ್ನೇಹಿತರೊಡ ಗೂಡಿ ಚಪ್ಪಾಳೆ ಕೃತಜ್ಞತೆ ಅರ್ಪಿಸಿದರು. ನಗರದಲ್ಲಿ ಚಪ್ಪಾಳೆ, ಜಾಗಟೆಯ ದನಿ ಮಾರ್ಧನಿಸಿತು. ಕೋವಿಡ್ 19  ವೈರಸ್‌ ಸೋಂಕು ಹರಡುವುದನ್ನು ತಪ್ಪಿ ಸಲು ಸರ್ಕಾರ ಮತ್ತು ಸ್ಥಳೀಯ ಆಡಳಿತ ತೆಗೆದು ಕೊಳ್ಳುತ್ತಿರುವ ಕ್ರಮಗಳನ್ನು ನಾಗರಿಕರು ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next