Advertisement

ಮಹೇಶ್‌ ಪ್ರೌಢಶಾಲೆಯಲ್ಲಿ ವೀರಯೋಧರಿಗೆ ನಮನ

03:05 PM Feb 01, 2018 | Team Udayavani |

ಮಹಾನಗರ : ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರನ್ನು ಸ್ಮರಿಸುವ ಕಾರ್ಯಕ್ರಮ ಕೊಟ್ಟಾರ ಮಹೇಶ್‌ ಪ್ರೌಢ ಶಾಲೆಯಲ್ಲಿ 69ನೇ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ನಡೆಯಿತು.

Advertisement

ಈ ಸಂದರ್ಭ ಮಂಗಳೂರು ಸೈಕ್ಲಿಂಗ್‌ ಕ್ಲಬ್‌ ಮತ್ತು ಮಹೇಶ್‌ ಪ್ರೌಢ ಶಾಲೆ ಜಂಟಿಯಾಗಿ ಸೈಕಲ್‌ ಜಾಥಾವನ್ನು ಆಯೋಜಿಸಿತು. ಡಿ.ಡಿ.ಪಿ.ಐ. ಕಚೇರಿ ಗೆಜೆಟೆಡ್‌ ಅಧಿಕಾರಿ ರಮೇಶ್‌ತುಂಬೆ ಕಾರ್ಯಕ್ರಮ ಉದ್ಘಾಟಿಸಿದರು. ಮಹೇಶ್‌ ಪ್ರೌಢ ಶಾಲಾ ಮೈದಾನದಿಂದ ಮಣ್ಣಗುಡ್ಡದ ವರೆಗೆ ಸುಮಾರು ಐದು ಕಿ.ಮೀ. ವ್ಯಾಪ್ತಿಯನ್ನು ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಕ್ರಮಿಸಿ ಹಿಂದಿರುಗಿದರು.

ಪ್ರಶಸ್ತಿ ಪತ್ರ ವಿತರಣೆ
ಮಹೇಶ್‌ ಪ್ರೌಢ ಶಾಲೆ ಮುಖ್ಯಸ್ಥೆ ದೀಪಾಲಿ ಶೆಣೈ ಅವರು ಸೈಕಲ್‌ಜಾಥಾದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next