Advertisement

ಥಾಣೆಯಲ್ಲಿ ಬೆಂಕಿ ಅನಾಹುತ: 5 ಅಂಗಡಿ ಭಸ್ಮ, ಜೀವಹಾನಿ ಇಲ್ಲ

11:53 AM Jan 06, 2018 | udayavani editorial |

ಥಾಣೆ : ಇಲ್ಲಿಗೆ ಸಮೀಪದ ಮುರ್ಬಾದ್‌ ಪಟ್ಟಣದಲ್ಲಿ  ಸಂಭವಿಸಿದ ಅಗ್ನಿ ದುರಂತದಲ್ಲಿ ಐದು ಅಂಗಡಿಗಳು ಸುಟ್ಟು ಭಸ್ಮವಾದವು; ಆದರೆ ಯಾವುದೇ ಜೀವ ಹಾನಿಯಾದ ವರದಿಗಳಿಲ್ಲ.

Advertisement

ನಿನ್ನೆ ಶುಕ್ರವಾರ ರಾತ್ರಿ 11 ಗಂಟೆಯ ಹೊತ್ತಿಗೆ ಬೆಂಕಿ ದುರಂತ ಸಂಭವಿಸಿತ್ತು. ಇಂದು ನಸುಕಿನ 2 ಗಂಟೆಯ ಹೊತ್ತಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು.

ಬೆಂಕಿ ದುರಂತ ಸಂಭವಿಸಿದ ಕಟ್ಟಡದ ನೆಲ ಮತ್ತು ಮೇಲಿನ ಅಂತಸ್ತಿನಲ್ಲಿದ್ದ ಐದು ಅಂಗಡಿಗಳು ಸುಟ್ಟು ಭಸ್ಮವಾದವು; ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಮುರ್ಬಾದ್‌ ತಹಶೀಲ್ದಾರ ಸಚಿನ್‌ ಚೌಧರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next