Advertisement

Test; ಗಾಯಕ್ವಾಡ್‌ ಬದಲು ಈಶ್ವರನ್‌; ಭಾರತ “ಎ’ ತಂಡದಲ್ಲೂ ಬದಲಾವಣೆ

11:49 PM Dec 23, 2023 | Team Udayavani |

ಮುಂಬಯಿ: ಕೈ ಬೆರಳಿನ ಮೂಳೆ ಮುರಿತಕ್ಕೆ ಸಿಲುಕಿ ದಕ್ಷಿಣ ಆಫ್ರಿಕಾ ಎದುರಿನ 2 ಪಂದ್ಯಗಳ ಟೆಸ್ಟ್‌ ಸರಣಿಯಿಂದ ಬೇರ್ಪಟ್ಟ ಆರಂಭಕಾರ ಋತುರಾಜ್‌ ಗಾಯ ಕ್ವಾಡ್‌ ಸ್ಥಾನಕ್ಕೆ ಅಭಿಮನ್ಯು ಈಶ್ವರನ್‌ ಆಯ್ಕೆಯಾಗಿದ್ದಾರೆ. ಗಾಯಕ್ವಾಡ್‌ ಬೆಂಗಳೂರಿನ ಎನ್‌ಸಿಎಯತ್ತ ಮುಖ ಮಾಡಿದ್ದಾರೆ.

Advertisement

“ದ್ವಿತೀಯ ಏಕದಿನ ಪಂದ್ಯದ ಕ್ಷೇತ್ರರಕ್ಷಣೆ ವೇಳೆ ಗಾಯಕ್ವಾಡ್‌ ಬಲಗೈ ಬೆರಳಿನ ಮೂಳೆ ಮುರಿತ ಕ್ಕೊಳಗಾಗಿದ್ದು, ಟೆಸ್ಟ್‌ ಸರಣಿಯಿಂದ ಬೇರ್ಪಟ್ಟಿದ್ದಾರೆ. ಅವರು ಎನ್‌ಸಿಎಗೆ ತಮ್ಮ ಗಾಯದ ವರದಿ ಸಲ್ಲಿಸಲಿದ್ದು, ಅಲ್ಲಿ ಬಿಸಿಸಿಐ ವೈದ್ಯಕೀಯ ತಂಡ ಚಿಕಿತ್ಸೆ ನೀಡಲಿದೆ. ಇವರ ಬದಲು ಅಭಿಮನ್ಯು ಈಶ್ವರನ್‌ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದರು.

ಆದರೆ ದಕ್ಷಿಣ ಆಫ್ರಿಕಾ ಪ್ರವಾಸ ದಲ್ಲಿ ಭಾರತ “ಎ’ ತಂಡವನ್ನು ಮುನ್ನಡೆಸುತ್ತಿರುವ ಈಶ್ವರನ್‌ ಕೇವಲ ದ್ವಿತೀಯ ಪಂದ್ಯಕ್ಕಷ್ಟೇ ಲಭ್ಯರಾಗಲಿದ್ದಾರೆ. ದಕ್ಷಿಣ ಆಫ್ರಿಕಾ “ಎ’ ವಿರುದ್ಧದ ಚತುರ್ದಿನ ಪಂದ್ಯ ಬಾಕ್ಸಿಂಗ್‌ ಡೇ ಟೆಸ್ಟ್‌ ದಿನದಂದೇ ಬೆನೋನಿಯಲ್ಲಿ ಆರಂಭವಾಗಲಿದೆ.

ಹರ್ಷಿತ್‌ ರಾಣಾ ಔಟ್‌
ಸ್ನಾಯು ಸೆಳೆತಕ್ಕೊಳಗಾಗಿರುವ ವೇಗಿ ಹರ್ಷಿತ್‌ ರಾಣಾ ಚತುರ್ದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ತಂಡಕ್ಕೆ ರಜತ್‌ ಪಾಟಿದಾರ್‌, ಸಫ‌ìರಾಜ್‌ ಖಾನ್‌, ಆವೇಶ್‌ ಖಾನ್‌ ಮತ್ತು ರಿಂಕು ಸಿಂಗ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಇವರೆಲ್ಲರೂ ಏಕದಿನ ತಂಡದಲ್ಲಿದ್ದರು. ಕುಲದೀಪ್‌ ಯಾದವ್‌ ಅವರನ್ನು ತಂಡ ದಿಂದ ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next