Advertisement

Test; ಹೆಚ್ಚುವರಿ ಆತ್ಮವಿಶ್ವಾಸದೊಂದಿಗೆ ಚೆನ್ನೈಗೆ ಬಂದ ಬಾಂಗ್ಲಾ ತಂಡ

01:09 AM Sep 16, 2024 | Team Udayavani |

ಚೆನ್ನೈ: ಪಾಕಿಸ್ಥಾನವನ್ನು ಅವರದೇ ಅಂಗಳದಲ್ಲಿ 2-0 ಅಂತರದಿಂದ ಮಣಿಸಿದ ಹೆಚ್ಚುವರಿ ಆತ್ಮವಿಶ್ವಾಸದೊಂದಿಗೆ ಬಾಂಗ್ಲಾದೇಶ ಟೆಸ್ಟ್‌ ತಂಡ ರವಿವಾರ ಚೆನ್ನೈಗೆ ಬಂದಿಳಿಯಿತು. ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಗುರುವಾರ ಮೊದಲ ಟೆಸ್ಟ್‌ ಆರಂಭಗೊಳ್ಳಲಿದೆ.

Advertisement

“ನಮ್ಮ ಪಾಲಿಗೆ ಇದು ನಿಜಕ್ಕೂ ಸವಾಲಿನ ಸರಣಿ. ಪಾಕಿಸ್ಥಾನ ವಿರುದ್ಧ ಎರಡೂ ಟೆಸ್ಟ್‌ ಗೆದ್ದ ಕಾರಣ ಸಹಜವಾಗಿಯೇ ತಂಡದಲ್ಲಿ ಹಾಗೂ ದೇಶದ ಜನತೆಯಲ್ಲಿ ಹೆಚ್ಚುವರಿ ಆತ್ಮವಿಶ್ವಾಸ ಮನೆಮಾಡಿದೆ. ಎರಡೂ ಪಂದ್ಯಗಳನ್ನು ಗೆಲ್ಲಲೆಂದೇ ಆಡಲಿದ್ದೇವೆ. ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ, ಕಾರ್ಯತಂತ್ರವನ್ನು ಯಶಸ್ವಿಗೊಳಿಸಿದರೆ ಉತ್ತಮ ಫ‌ಲಿತಾಂಶ ಪಡೆಯಲು ಸಾಧ್ಯ’ ಎಂಬುದಾಗಿ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್‌ ಹುಸೇನ್‌ ಶಾಂತೊ ಢಾಕಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಹೇಳಿದರು.

“ರ್‍ಯಾಂಕಿಂಗ್‌ ಗಮನಿಸುವುದಾದರೆ, ಭಾರತ ಎಷ್ಟೋ ಮೇಲಿದೆ. ಆದರೆ ನಾವು ಐದೂ ದಿನಗಳ ಕಾಲ ಉತ್ತಮವಾಗಿ ಆಡುವುದು ಮುಖ್ಯ. ಕೊನೆಯ ದಿನದ ಕೊನೆಯ ಅವಧಿಯಲ್ಲಿ ಫ‌ಲಿತಾಂಶ ಲಭಿಸುವಂತಿರಬೇಕು. ಇಲ್ಲಿ ಎರಡೂ ತಂಡಗಳಿಗೆ ಅವಕಾಶ ಇದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next