Advertisement

“ನಾವು ಸ್ವಾತಂತ್ರ್ಯದ ಸನಿಹದಲ್ಲಿದ್ದೇವೆ”: ಕಣಿವೆ ರಾಜ್ಯದಲ್ಲಿ ಗಲಭೆ ಎಬ್ಬಿಸಲು ಉಗ್ರರ ಸಂಚು

09:48 AM Sep 01, 2019 | Team Udayavani |

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದತಿಯ ನಂತರ ಸಹಜ ಸ್ಥಿತಿಗೆ ಬಂದಿದ್ದ ಜನಜೀವನವನ್ನು ಹಾಳುಗೆಡವಲು ಉಗ್ರರು ಪಣ ತೊಟ್ಟಂತಿದೆ. ಪಾಕ್‌ ಮೂಲದ ಉಗ್ರರು ಕಾಶ್ಮೀರದಲ್ಲಿ ಜನರಿಗೆ ಅಂಗಡಿ ಮುಂಗಟ್ಟು ತೆರೆಯದಂತೆ, ಟ್ಯಾಕ್ಸಿಗಳನ್ನು ಓಡಿಸದಂತೆ  ಬೆದರಿಕೆ ಒಡ್ಡುತ್ತಿದ್ದಾರೆ.

Advertisement

ಉಗ್ರ ಸಂಘಟನೆಗಳಾದ ಲಷ್ಕರ್‌ ಎ ತೋಯ್ಬಾ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಒಂದು ಪತ್ರ ಬಿಡುಗಡೆ ಮಾಡಿದ್ದು, “ನಾವು ಸ್ವಾತಂತ್ರ್ಯದ ಸನಿಹದಲ್ಲಿದ್ದೇವೆ, ನಮ್ಮ ಕೆಲಸವನ್ನು ಇನ್ನೂ ಸಧೃಡಗೊಳಿಸಬೇಕಿದೆ” ಎಂದು ಪತ್ರದಲ್ಲಿ ಬರೆದುಕೊಂಡಿದೆ. ಕಣಿವೆಯಲ್ಲಿ ಯಾರೂ ತಮ್ಮ ಮನೆಯಿಂದ ಹೊರಬರಬಾರದು. ಟ್ಯಾಕ್ಸಿಗಳನ್ನು ಓಡಿಸಬಾರದು. ಎಲ್ಲಾ ಟ್ಯಾಕ್ಸಿಗಳ ನೋಂದಣಿ ಸಂಖ್ಯೆಗಳು ನಮ್ಮ ಸಂಗ್ರಹದಲ್ಲಿದೆ. ಯಾರಾದರೂ ಟ್ಯಾಕ್ಸಿಗಳನ್ನು ರಸ್ತೆಗೆ ತಂದರೆ ಅವರು ಮುಂದಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉಗ್ರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಶಾಲಾ ಕಾಲೇಜುಗಳನ್ನು ಮರು ಆರಂಭಗೊಳಿಸಿರುವ ಕ್ರಮದ ಬಗ್ಗೆಯೂ ಉಗ್ರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಅಂಗಡಿ ರಾತ್ರಿಯವರೆಗೂ ತೆರೆದಿದ್ದ ಕಾರಣಕ್ಕಾಗಿ 65 ವರ್ಷದ ವೃದ್ದನನ್ನು ಗುರುವಾರ ಉಗ್ರರು ಹತ್ಯೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next