Advertisement

ಆನೇಕಲ್‌ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ

11:05 AM Nov 12, 2021 | Team Udayavani |

ಆನೇಕಲ್‌: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ನ ಆನೇಕಲ್‌ ಉಪ ವಿಭಾಗದ ಹಲವಾರು ಕಳ್ಳತನ ಪ್ರಕರಣಗಳನ್ನು ಬೇಧಿಸಿದ್ದಾರೆ. 35 ಲಕ್ಷ ರೂ. ಮೌಲ್ಯ ಬೈಕ್‌ ವಶ ಪಡಿಸಿಕೊಂಡು. ವಿವಿಧ ಠಾಣೆಗಳ ಸುಮಾರು 32 ಪ್ರಕರಣಗಳನ್ನು ಪತ್ತೆ ಮಾಡಿ ಬೈಕ್‌ಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ವಂಶಿಕೃಷ್ಣ ಹೇಳಿದರು.

Advertisement

ತಾಲೂಕಿನ ಜಿಗಣಿ ಪೊಲೀಸ್‌ ಠಾಣೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಆನೇಕಲ್‌ ಉಪ ವಿಭಾಗದ ಎಲ್ಲ ಠಾಣೆಗಳಲ್ಲಿನ ಇನ್ಸ್‌ಪೆಕ್ಟರ್ ಮತ್ತು ಸಬ್‌ ಇನ್ಸ್‌ ಪೆಕ್ಟರ್‌ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದರಿಂ ದಲೇ ಬೈಕ್‌, ಮೊಬೈಲ್‌, ಚೈನ್‌ ಕಳ್ಳರನ್ನು ಬಂಧಿಸಿದ್ದಾರೆ. ಇವತ್ತು ಪ್ರಮುಖವಾಗಿ ಮೂರು ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದರು.

ಜೋಡಿ ಕೊಲೆ: ಅತ್ತಿಬೆಲೆ ಪೊಲೀಸ್‌ ಠಾಣಾ ವ್ಯಾಪ್ತಿಯ ಜೋಡಿ ಕೊಲೆ ಪ್ರಕರಣವನ್ನು ಯಶಸ್ವಿ ಯಾಗಿ ಬೇಧಿಸಿ ಆರೋಪಿಗಳನ್ನು ಬಂಧಿಸಿ ಪ್ರಮಾಣಿಕವಾಗಿ ತನಿಖೆ ನಡೆಸುತ್ತಿದ್ದಾರೆ. ಕಳೆದ ತಿಂಗಳ 21 ರಂದು ಬಳ್ಳೂರು ಕ್ರಾಸ್‌ ಬಳಿ ಇಬ್ಬರು ಯವಕರ ಕೊಲೆಯಾಗಿತ್ತು.

ಕೊಲೆಯಾದವರು ಮಾಯಸಂದ್ರದ ವಾಸಿಗಳಾದ ಭಾಸ್ಕರ್‌ ಮತ್ತು ದೀಪಕ್‌ ಕುಮಾರ್‌ ಹಣಕಾಸಿ ವ್ಯವಹಾರದ ಹಿನ್ನೆಲೆಯಲ್ಲಿ ಇವರ ಸ್ನೇಹಿತರೆ ಆಗಿದ್ದ ತಮಿಳುನಾಡು ಮೂಲದ ಅರಣ್‌ ಕುಮಾರ್‌, ಆನೇಕಲ್‌ ಸಮೀಪದ ಮಾರನಾಯಕನಹಳ್ಳಿಯ ಲಕ್ಷಿ¾ನಾರಾಯಣ್‌, ರಾಚನಾಮಹಳ್ಳಿಯ ಸುಮನ್‌ ಕೊಲೆ ಮಾಡಿದ ಆರೋಪಿಗಳು ಇವರನ್ನು ಸರಿಯಾದ ಸಾಕ್ಷ್ಯಾಧಾರಗಳ ಸಮೇತ ಅತ್ತಿಬೆಲೆ ಪೊಲೀಸರು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಆರೋಪಿಗಳಿಂದ ಎರಡು ಬೈಕ್‌ ನಾಲ್ಕು ಮೊಬೈಲ್‌ ಕೃತ್ಯಕ್ಕೆ ಬಳಸಿದ್ದ ಚಾಕು ವಶ ಪಡಿಸಿಕೊಂಡಿದ್ದಾರೆ.

32 ಬೈಕ್‌ ವಶ: ಜಿಗಣಿ ಪೊಲೀಸ್‌ ಠಾಣೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸರಣಿಯಾಗಿ ಬೈಕ್‌ ಕಳ್ಳತನ ಮಾಡುತ್ತಿದ್ದ ಆರೋಪಿ ಶರತ್‌ ಬಾಬು ಎಂಬುವನನ್ನು ಬಂಧಿಸಿ ಆತನಿಂದ ಸುಮಾರು 25 ಲಕ್ಷ ರೂ. ಮೌಲ್ಯದ 32 ಬೈಕ್‌ಗಳನ್ನು ವಶ ಪಡಿಸಿ ಕೊಂಡಿದ್ದಾರೆ. ಆರೋಪಿ ಶರತ್‌ ಬಾಬು ತಮಿಳುನಾಡಿನ ಮೂಲದವನ್ನಾಗಿದ್ದು ಬೆಳಗಿನ ವೇಳೆಯಲ್ಲಿ ಮನೆಗಳ ಬಳಿ ಸುತ್ತಾಡಿ ರಾತ್ರಿ ಬಂದು ಬೈಕ್‌ಗಳನ್ನು ಕಳವು ಮಾಡಿ ಕೊಂಡು ತಮಿಳು ನಾಡಿನ ಗುಡಿಯಾತಂ, ವೆಲ್ಲೂರು ಕಡೆಗಳಲ್ಲಿ ಬೈಕ್‌ನ ನಂಬರ್‌ ಪ್ಲೇಟ್‌ ಬದಲಿಸಿ ಮಾರಾಟ ಮಾಡುತ್ತಿದ್ದ. ಇವನನ್ನು ಬೈಕ್‌ ಕಳವು ಮಾಡುವ ಸಮಯದಲ್ಲೇ ಬಂಧಿಸಿ ಅವನಿಂದ ಬೈಕ್‌ಗಳನ್ನು ವಶ ಪಡಿಸಿಕೊಂಡು ಮಾಲೀಕರಿಗೆ ನೀಡಲಾಗಿದೆ ಎಂದು ಹೇಳಿದರು.

Advertisement

ಕುಖ್ಯಾತನ ಕಳ್ಳರ ಬಂಧನ: ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿ ಸೇರಿದಂತೆ ಹಲವು ಕಡೆಗಳಲ್ಲಿ ಬೈಕ್‌ ಗಳನ್ನು ಕದ್ದು, ನಂಬರ ಪ್ಲೇಟ್‌ಗಳನ್ನು ಬದಲಾಯಿಸಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನು ಬಂಧಿಸಿ ಅವರಿಂದ 10 ಲಕ್ಷ ರೂ. ಮೌಲ್ಯದ 11 ಬೈಕ್‌ ಮತ್ತು 18 ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:- ತೆಂಗಿನಕಾಯಿ ಹರಾಜು ಪ್ರಕ್ರಿಯೆ ರದ್ದುಗೊಳಿಸಲು ಆಗ್ರಹಿಸಿ ಮನವಿ

ಆರೋಪಿಗಳಾದ ಅಜಯ್‌, ಮಂಜುನಾಥ, ಶಿವಕುಮಾರ್‌, ಇವರು ಹಲವು ವರ್ಷಗಳಿಂದ ಇದೇ ಕೆಲಸ ಮಾಡಿ ಕೊಂಡು ಪೊಲೀಸರಿಗೆ ಯಾವುದೇ ಸುಳಿವು ಸಿಗದ ರೀತಿಯಲ್ಲಿ ತಲೆಮರಿಸಿಕೊಂಡು ಓಡಾಡಿ ಕೊಂಡಿದ್ದರು. ಇತ್ತಿಚೆಗೆ ಬನ್ನೇರುಘಟ್ಟ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದರು ಎಂದು ತಿಳಿಸಿದ್ದಾರೆ.

ಬಹುಮಾನ: ನಾಲ್ಕು ವರ್ಷಗಳಿಂದ ಬೈಕ್‌ಗಳನ್ನು ಕಳ್ಳತನ ಮಾಡಿ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಕಳ್ಳರನ್ನು ಜಿಗಣಿ ಮತ್ತು ಬನ್ನೇರುಘಟ್ಟ ಪೊಲೀಸರು ಬಂಧಿಸಿ ಅವರಿಂದ ದೊಡ್ಡ ಮಟ್ಟದಲ್ಲಿ ಬೈಕ್‌ಗಳನ್ನು ವಶ ಪಡಿಸಿಕೊಂಡು ಜನರಲ್ಲಿ ಪೊಲೀಸರ ಸೇವೆ ಬಗ್ಗೆ ಪ್ರಶಂಸೆಗೆ ಕಾರಣರಾಗಿರುವುದರಿಂದ ಬೈಕ ಕಳ್ಳರನ್ನು ಬಂಧಿಸಲು ಕಾರಣರಾದ ಜಿಗಣಿ ಪೊಲೀಸ್‌ ಠಾಣೆಯ ಪೊಲೀಸ್‌ ಹಾಗೂ ಬನ್ನೇರುಘಟ್ಟ ಠಾಣೆ ಸಿಬ್ಬಂದಿ ತಂಡಕ್ಕೆ ಸೇರಿ ಒಟ್ಟು 25 ಸಾವಿರ ರೂ. ನಗದು ಬಹುಮಾನವಾಗಿ ನೀಡಲಾಯಿತು.

32 ಪ್ರಕಣರ ಪತ್ತೆ: ಜಿಗಣಿ ಪೊಲೀಸ್‌ ಠಾಣೆಯ 18, ಬನ್ನೇರುಘಟ್ಟ ಠಾಣೆಯ 3, ಆನೇಕಲ್‌ ಪೊಲೀಸ್‌ ಠಾಣೆಯ 1 ಸೇರಿದಂತೆ ಬೆಂಗಳೂರುನಗರ ವಿವಿಧ ಠಾಣೆಗಳ 32 ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ನಮ್ಮ ಸಿಬ್ಬಂದಿ ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ.

ಬೈಕ್‌ ಪ್ರಕರಣ ಹೆಚ್ಚು: ಈ ವಿಭಾಗದ ಸೂರ್ಯನಗರ, ಹೆಬ್ಬಗೋಡಿ, ಚಂದಾಪುರ ಭಾಗಗಲ್ಲಿ ಎರಡು ದಿನಗಳಿಗೊಮ್ಮೆ ಬೈಕ್‌ ಕಳ್ಳತನ ವರದಿಯಾಗುತ್ತಿದೆ. ಆದರೂ ನಮ್ಮ ಅಪರಾಧ ತಂಡ ಕಾರ್ಯಾಚಣೆಯಲ್ಲಿ ತೊಡಗಿದೆ. ಎಲ್ಲ ಬೈಕ್‌ ಕಳವು ಪ್ರಕರಣಗಳನ್ನು ಪತ್ತೆ ಮಾಡುತ್ತೇವೆ ಎಂದು ಹೇಳಿದರು. ಬೆಂಗಳೂರು ನಗರ ಗ್ರಾಮಾಂತರ ಜಿಲ್ಲಾ ಪೊಲೀಸ್‌ ನ ಅಪರಾಧ ವಿಭಾಗದ ಪೊಲೀಸ್‌ ಅಧೀಕ್ಷಕ ಲಕ್ಷ್ಮೀಗಣೇಶ್‌, ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಮಲ್ಲೇಶ್‌, ಅತ್ತಿಬೆಲೆ ವೃತ್ತ ನಿರೀಕ್ಷಕರ ವಿಶ್ವನಾಥ್‌, ಅನೇಕಲ್‌ ವೃತ್ತ ನಿರೀಕ್ಷಕ ಮಹಾನಂದ, ಜಿಗಣಿ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕ ಸುದರ್ಶನ್‌ ಎಚ್‌.ವಿ, ಸಬ್‌ ಇನ್ಸ್‌ಪೆಕ್ಟರ್‌, ಶಿವಲಿಂಗನಾಯ್ಕ ಇದ್ದರು.

ಜನರ ಬಳಿಗೆ ಪೊಲೀಸ್‌

ಅಪರಾಧ ತಡಗೆ ಪುಟ್‌ ಪ್ಯಾಟ್ರೊಲಿಂಗ್‌ ಆರಂಭಿಸಿದ್ದೇವೆ. ಪ್ರತಿ ಠಾಣೆಗಳಿಂದ ನಾಲ್ಕು ಐದು ಪೊಲೀಸರು ಮೊದಲೇ ಗುರುತಿಸಿರುವ ಖಾಲಿ ಬಡಾವಣೆ, ಪ್ರಮುಖ ವೃತ್ತಗಳಲ್ಲಿ, ವೈನ್‌ಶಾಪ್‌ ಗಳ ಬಳಿ ತೆರಳಿ ಅಲ್ಲಿನ ನಾಗರಿಕರ ಬಳಿ ಅಪರಾಧ ಕೃತ್ಯ ನಡೆಸುವವರ ಬಗ್ಗೆ ಮಾಹಿತಿ ಕಳೆ ಹಾಕಿ, ಯಾರಾದರೂ ಅನುಮಾನಸ್ಪದವಾಗಿ ಕಂಡರೆ ಅವರ ಬಗ್ಗೆ ಠಾಣೆಗೆ ಮಾಹಿತಿ ನೀಡಿ ಎಂದು ಹೇಳಿ ಪೊಲೀಸರು ಸದಾ ನಿಮ್ಮೊಂದಿಗೆ ಇರುತ್ತಾರೆ ಎಂಬ ವಿಶ್ವಾಸ ಮೂಡಿಸಲಿದ್ದಾರೆ ಎಂದು ಎಸ್ಪಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next