Advertisement

ಹತ್ತು ರೂ. ಪಾರ್ಕಿಂಗ್‌ ಶುಲ್ಕಕ್ಕಾಗಿ ಕೊಲೆ!

12:56 AM May 11, 2019 | Team Udayavani |

ಬೆಂಗಳೂರು: ಚಿತ್ರಮಂದಿರದ ಮುಂಭಾಗ ಬೈಕ್‌ ನಿಲ್ಲಿಸಲು 10 ರೂ. ಪಾರ್ಕಿಂಗ್‌ ಶುಲ್ಕ ಕೇಳಿದ್ದಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಭಾರತಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಭರಣಿಧರನ್‌ (36) ಕೊಲೆಯಾದವರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಭಾರತಿನಗರ ಠಾಣೆ ಪೊಲೀಸರು, ಕೊಲೆ ಆರೋಪಿಗಳಾದ ಸೆಲ್ವರಾಜ್‌ ಹಾಗೂ ಶೇಖರ್‌ ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆಸ್ಟಿನ್‌ಟೌನ್‌ ನಿವಾಸಿ ಭರಣಿಧರನ್‌, ತನ್ನ ಸಂಬಂಧಿಕ ಹುಡುಗನ ಜತೆ ಕಾಂಚನಾ-3 ಸಿನಿಮಾ ವೀಕ್ಷಿಸಲು ಗುರುವಾರ ಸಂಜೆ ಹಲಸೂರು ಸಮೀಪದ ಲಾವಣ್ಯ ಚಿತ್ರಮಂದಿರಕ್ಕೆ ಬೈಕ್‌ನಲ್ಲಿ ಹೋಗಿದ್ದರು. ಈ ವೇಳೆ ಬೈಕ್‌ ನಿಲ್ಲಿಸಿದ್ದಕ್ಕೆ ಪಾರ್ಕಿಂಗ್‌ ಶುಲ್ಕವಾಗಿ 10 ರೂ. ನೀಡುವಂತೆ ಸೆಲ್ವರಾಜ್‌ ಭರಣಿಧರನ್‌ಗೆ ಕೇಳಿದ್ದಾರೆ.

ಅಷ್ಟೊಂದು ಶುಲ್ಕ ಏಕೆ ಎಂದು ಭರಣಿ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಸೆಲ್ವರಾಜ್‌ ಹಾಗೂ ಆತನ ಸ್ನೇಹಿತ ಶೇಖರ್‌, ಭರಣಿಯನ್ನು ಥಳಿಸಿದ್ದಾರೆ.

ಕೂಡಲೇ ಅಲ್ಲಿದ್ದವರು ಜಗಳ ಬಿಡಿಸಿ, ಹಲ್ಲೆಗೊಳಗಾಗಿದ್ದ ಭರಣಿಯನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next