Advertisement

ತಾತ್ಕಾಲಿಕ ದುರಸ್ತಿ ಕಾರ್ಯ

12:28 PM Nov 03, 2018 | Team Udayavani |

ಪುಂಜಾಲಕಟ್ಟೆ: ಹದಗೆಟ್ಟು ಸಂಚಾರಕ್ಕೆ ತೊಡಕುಂಟಾಗಿದ್ದ ಬಂಟ್ವಾಳ- ಸಿದ್ದಕಟ್ಟೆ ರಸ್ತೆಯ ದುರಸ್ತಿ ಕಾರ್ಯ ಗುರುವಾರ ಆರಂಭಗೊಂಡಿದೆ. ರಸ್ತೆಯ ಗುಂಡಿಗಳನ್ನು ಮುಚ್ಚಿ ಡಾಮರು ಹಾಕಿ ತೇಪೆ ಕಾರ್ಯ ನಡೆಸಿ ತಾತ್ಕಾಲಿಕವಾಗಿ ರಸ್ತೆಯನ್ನು ಅಭಿವೃದ್ಧಿ ಗೊಳಿಸಲಾಗುವುದು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ 9 ಲಕ್ಷ ರೂ. ವೆಚ್ಚದಲ್ಲಿ ಬಂಟ್ವಾಳದಿಂದ ಸಿದ್ದಕಟ್ಟೆಯವರೆಗೆ 14 ಕಿ.ಮೀ ದೂರದ ರಸ್ತೆಯನ್ನು ದುರಸ್ತಿಗೊಳಿಸಲಾಗುತ್ತಿದೆ.

Advertisement

ಈ ರಸ್ತೆಯಲ್ಲಿ ಮಳೆಗಾಲ ಬಳಿಕ ಗುಂಡಿಗಳು ಉಂಟಾಗಿದ್ದು, ಸಂಚಾರ ಪ್ರಯಾಸವಾಗಿತ್ತು. ಈ ಬಗ್ಗೆ ಉದಯವಾಣಿ ಸುದಿನ ಅ. 30ರಂದು ಸಚಿತ್ರ ವರದಿ ಪ್ರಕಟಿಸಿತ್ತು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ರಸ್ತೆ ದುರಸ್ತಿಗೊಳಿಸುವಂತೆ ಅಧಿಕಾರಿಗಳಲ್ಲಿ ವಿನಂತಿಸಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಈ ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ನಿಧಿಯಿಂದ 5 ಕೋ. ರೂ. ಅನುದಾನ  ಬಿಡುಗಡೆಗೊಳಿಸಿದ್ದು, ಬಳಿಕ ತಾಂತ್ರಿಕ ಕಾರಣದಿಂದ ರದ್ದು ಗೊಂಡಿತ್ತು.

ಇದರಿಂದ ರಸ್ತೆ ದುರಸ್ತಿ ಕಾರ್ಯ ವಿಳಂಬವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಭಿಯಂತ ಉಮೇಶ್‌ ಭಟ್‌ ಅವರು ತಿಳಿಸಿದ್ದಾರೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವತಿಯಿಂದ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೇಲ್ದರ್ಜೆಗೆ
ಪ್ರಸ್ತುತ ತಾತ್ಕಾಲಿಕವಾಗಿ ದುರಸ್ತಿ ನಡೆಯುತ್ತಿದೆ. ಭಾರತ್‌ ಮಾಲಾ ಯೋಜನೆಯಲ್ಲಿ ರಸ್ತೆ ಮೇಲ್ದರ್ಜೆಗೇರಲಿದ್ದು, ಸರ್ವೆ ನಡೆದಿದ್ದು, ಅನುಮೋದನೆ ದೊರಕಿದೆ. ಶೀಘ್ರ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.
– ಉಮೇಶ್‌ ಭಟ್‌
ಲೋಕೋಪಯೋಗಿ
ಕಾರ್ಯನಿರ್ವಾಹಕ ಅಭಿಯಂತರು

Advertisement

Udayavani is now on Telegram. Click here to join our channel and stay updated with the latest news.

Next