Advertisement

ಕಮರಿಪೇಟೆ ಠಾಣೆ ತಾತ್ಕಾಲಿಕ ಸ್ಥಳಾಂತರ

02:53 PM Apr 20, 2020 | Suhan S |

ಹುಬ್ಬಳ್ಳಿ: ಇಲ್ಲಿನ ತೊರವಿ ಹಕ್ಕಲ ಬಳಿಯ ಕರಾದಿ ಓಣಿಯ ಸ್ಮಶಾನ ಕಾವಲುಗಾರನಿಗೆ ಕೋವಿಡ್ 19 ಸೋಂಕು ತಗುಲಿದ್ದರಿಂದ 100 ಮೀಟರ್‌ ವ್ಯಾಪ್ತಿ ಪ್ರದೇಶ ಸೀಲ್‌ಡೌನ್‌ ಆಗಿದ್ದರಿಂದ ಕಮರಿಪೇಟೆ ಪೊಲೀಸ್‌ ಠಾಣೆ ತಾತ್ಕಾಲಿಕವಾಗಿ ಸ್ಥಳಾಂತರವಾಗಿದೆ.

Advertisement

ಇಲ್ಲಿನ ಮುಲ್ಲಾ ಓಣಿಯಲ್ಲಿ ಒಂದೇ ಕುಟುಂಬದ ಐವರು ಕೋವಿಡ್‌-19 ಸೋಂಕು ಹೊಂದಿದ್ದು, ಇವರಲ್ಲಿನ ಓರ್ವರೊಂದಿಗೆ ಸ್ಮಶಾನ ಕಾವಲುಗಾರ ದ್ವಿತೀಯ ಸಂಪರ್ಕ ಹೊಂದಿದ್ದರಿಂದ ಅವರಲ್ಲೂ ಸೋಂಕು ಕಂಡು ಬಂದಿದೆ. ಹೀಗಾಗಿ ಕರಾದಿ ಓಣಿಯ ಸುತ್ತಮುತ್ತಲಿನ 100 ಮೀಟರ್‌ ಪ್ರದೇಶ ಸೀಲ್‌ ಡೌನ್‌ ಆಗಿದ್ದು, ಇದರ ವ್ಯಾಪ್ತಿಯಲ್ಲಿ ಕಮರಿಪೇಟೆ ಪೊಲೀಸ್‌ ಠಾಣೆ ಬರುವ ಕಾರಣ ರವಿವಾರ ಮಧ್ಯಾಹ್ನವೇ ಈ ಠಾಣೆಯನ್ನು ಕಾರವಾರ ರಸ್ತೆಯ ಬಾಸೆಲ್‌ ಮಿಷನ್‌ ಮೇರಿ ಮೊಮೊರಿಯಲ್‌ ಚರ್ಚ್‌ ಬಳಿಯ ಹೆಬಿಕ್‌ ಪ್ರಾರ್ಥನಾ ಮಂದಿರಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ.

ಈಗಾಗಲೇ ತಾತ್ಕಾಲಿಕ ಠಾಣೆಗೆ ಪೀಠೊಪಕರಣ, ಅಗತ್ಯ ದಾಖಲೆ ಪತ್ರಗಳನ್ನು ಸ್ಥಳಾಂತರಿಸುವ ಕಾರ್ಯ ನಡೆದಿದೆ. ಠಾಣೆಯ ಸಿಬ್ಬಂದಿ ಸಹಿತ ಇಲ್ಲಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next