Advertisement

ಹಳ್ಳಕ್ಕೆ ಮಗುಚಿದ ಟಿಟಿ ವಾಹನ: ಮೂವರು ಸಾವು, 11 ಮಂದಿಗೆ ಗಾಯ

10:28 AM Jan 08, 2021 | Team Udayavani |

ಚಾಮರಾಜನಗರ: ರಸ್ತೆ ಬದಿ ಹಳ್ಳಕ್ಕೆ ಟೆಂಪೋ ಟ್ರಾವೆಲರ್ ಮಗುಚಿ ಮೂವರು ಸಾವಿಗೀಡಾಗಿರುವ ಘಟನೆ ತಾಲೂಕಿನ ಸುವರ್ಣಾವತಿ ಜಲಾಶಯದ ಸಮೀಪ ಶುಕ್ರವಾರ ಬೆಳಗಿನ ಜಾವ 4.30 ರ ಸುಮಾರಿಗೆ ನಡೆದಿದೆ.

Advertisement

ಈ ಟಿಟಿ ವಾಹನ ತಮಿಳುನಾಡಿನ ತಿರುಪೂರ್‌ನಿಂದ ಮೈಸೂರಿಗೆ ಹೋಗುತ್ತಿತ್ತು. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ತಮಿಳುನಾಡಿನ ತಿರುಪೂರಿನ ಕನಕಪಾಳ್ಯಂ, ಕಸ್ತೂರಿಬಾಯಿ ನಗರದ ಒಂದೇ ಕುಟುಂಬದತಿ ಸುಬ್ರಹ್ಮಣ್ಯ (75), ಅಮರಾವತಿ (65) , ಕೋಕಿಲಾ (35) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ನೆರಿಯಾ ಗಂಡಿಬಾಗಿಲು: ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿಯ ಕೊಲೆ

ರಾಷ್ಟ್ರೀಯ ಹೆದ್ದಾರಿ 209 ರ ಗುಡಿಬೋರೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯ ಪಕ್ಕ ಹಳ್ಳಕ್ಕೆ ಟಿಟಿ ಮಗುಚಿದೆ. ಇದರಿಂದಾಗಿ ಸ್ಥಳದಲ್ಲೇ ಮೂರು ಮಂದಿ ಮೃತರಾಗಿದ್ದಾರೆ.

Advertisement

ಗಾಯಾಳುಗಳನ್ನು ಚಾಮರಾಜನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next