Advertisement

ಕರಾವಳಿಯ ದೇವಸ್ಥಾನಗಳಲ್ಲಿ  ಭಕ್ತ ಸಂದೋಹ

09:48 AM Dec 24, 2018 | |

ಸುಬ್ರಹ್ಮಣ್ಯ/ಕೊಲ್ಲೂರು/ಉಡುಪಿ: ಶಾಲೆ-ಕಾಲೇಜುಗಳು ಮತ್ತು ಸರಕಾರಿ ಕಚೇರಿಗಳಿಗೆ ಸಾಲು ರಜೆಗಳು ಆರಂಭವಾಗಿದ್ದು, ಕರಾವಳಿಯ ದೇಗುಲಗಳಲ್ಲಿ ಅಧಿಕ ಭಕ್ತಸಂದೋಹ ಕಾಣಿಸಿಕೊಂಡಿದೆ. ಸುಬ್ರಹ್ಮಣ್ಯದಲ್ಲಿ ದಾಖಲೆಯ 135 ತುಲಾಭಾರ ಸೇವೆಗಳು ನಡೆದರೆ ಕೊಲ್ಲೂರಿನಲ್ಲಿ ವರ್ಷಾಧಿಕ 20 ಸಾವಿರಕ್ಕೂ ಹೆಚ್ಚು ಭಕ್ತರು ದೇವಿ ದರ್ಶನ ಪಡೆದರು.

Advertisement

ಕುಕ್ಕೆ ಸುಬ್ರಹ್ಮಣ್ಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, ರವಿವಾರ ದಾಖಲೆಯ 135 ತುಲಾಭಾರ ಸೇವೆ ನೆರವೇರಿದೆ. ಕೊಲ್ಲೂರು ದೇವಸ್ಥಾನದಲ್ಲಿ 20 ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀದೇವಿಯ ದರ್ಶನ ಪಡೆದಿದ್ದಾರೆ. ಮಧ್ಯಾಹ್ನ 10 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಗರಿಷ್ಠ 3 ಸಾವಿರ ಜನರು ಭೇಟಿ ನೀಡುತ್ತಿದ್ದು, ಇಂದಿನ ಭಕ್ತ ಸಂದೋಹ ವರ್ಷದಲ್ಲಿಯೇ ಅತಿ ಹೆಚ್ಚು ಎಂದು ದೇಗುಲದ ಮೂಲಗಳು ತಿಳಿಸಿವೆ. ಶ್ರೀಕೃಷ್ಣಮಠದಲ್ಲಿ ರವಿವಾರ ಭಕ್ತರ ಸಂಖ್ಯೆ ಹೆಚ್ಚಿಗೆ ಇತ್ತು. ಸರಣಿ ರಜೆ ಇರುವುದರಿಂದ ಸೋಮವಾರ ರಜೆ ಹಾಕಿ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿಗೆ ಆಗಿದೆ. ಭೋಜನ ಪ್ರಸಾದಕ್ಕೂ ಭಕ್ತರ ಸಂಖ್ಯೆ ಹೆಚ್ಚಿಗೆ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next