Advertisement

AMU ಆವರಣದೊಳಗೆ ಸರಸ್ವತಿ ಮಂದಿರ : ಬಿಜೆಪಿ ಯುವ ದಳ ಆಗ್ರಹ

06:45 AM Feb 08, 2019 | udayavani editorial |

ಆಲೀಗಢ : ಉತ್ತರ ಪ್ರದೇಶದಲ್ಲಿನ ಆಲೀಗಢ ಮುಸ್ಲಿಂ ವಿಶ್ವವಿದ್ಯಾಲಯ (AMU)ದಲ್ಲಿ ಅಧ್ಯಯನ ನಡೆಸುತ್ತಿರುವ ಹಿಂದೂ ಸಮುದಾಯದ ವಿದ್ಯಾರ್ಥಿಗಳಿಗಾಗಿ ವಿವಿ ಆವರಣದೊಳಗೆ ಸರಸ್ವತಿ ಮಂದಿರವೊಂದನ್ನು ನಿರ್ಮಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಯುವ ದಳ ಆಗ್ರಹಿಸಿದೆ. 

Advertisement

ಆಲೀಗಢ ಬಿಜೆಪಿ ಯುವ ದಳವು AMU ಕುಲಪತಿಗಳಿಗೆ ಪತ್ರ ಬರೆದು ವಿವಿ ಆವರಣದೊಳಗೆ ಮಂದಿರ ನಿರ್ಮಾಣವನ್ನು ಆಗ್ರಹಿಸಿದೆ. 

ತನ್ನ ಈ ಬೇಡಿಕೆಯನ್ನು ಪರಿಗಣಿಸಲು ಬಿಜೆಪಿ ಯುವ ದಳವು ಎಎಂಯು ಆಡಳಿತೆಗೆ 15 ದಿನಗಳ ಗಡುವು ವಿಧಿಸಿದೆ. ಇದಕ್ಕೆ ತಪ್ಪಿದಲ್ಲಿ ವಿವಿ ಆವರಣದೊಳಗೆ ದೇವಾಲಯವನ್ನು ನಿರ್ಮಿಸಿಕೊಳ್ಳುವ ಕೆಲಸವನ್ನು ನಾವೆ ಕೈಗೆತ್ತಿಕೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನು ಅದು ನೀಡಿದೆ. ಇದನ್ನು ಬಿಜೆಪಿ ಯುವ ದಳದ ಜಿಲ್ಲಾ ಅಧ್ಯಕ್ಷ ಮುಕೇಶ್‌ ಸಿಂಗ್‌ ಲೋಧಿ ಮಾಧ್ಯಮಕ್ಕೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next