Advertisement

ದೇವಾಲಯಗಳಲ್ಲಿ ದಸರಾ ವಿಶೇಷ ಪೂಜೆ

01:20 PM Oct 08, 2021 | Team Udayavani |

ಬೆಂಗಳೂರು: ನವರಾತ್ರಿ ಹಿನ್ನೆಲೆಯಲ್ಲಿ ಗುರುವಾರ ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು. ಬೆಳಗ್ಗೆಯಿಂದ ಸಂಜೆ ವರೆಗೂ ದೇವರಿಗೆ ವಿಶೇಷ ಆಲಂಕಾರ ಮತ್ತು ಪೂಜೆ ಸಾಗಿದವು. ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನ ಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶರನ್ನವರಾತ್ರೋತ್ಸವ ಹಿನ್ನೆಲೆಯಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.

Advertisement

ಗುರುರಾಯರ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಬೆಳಗ್ಗೆ 7ಗಂಟೆಗೆ “ಘೃತ ಮತ್ತು ತೈಲ ನಂದಾದೀಪದೊಂದಿಗೆ ಘಟಸ್ಥಾಪನೆ ಹಾಗೂ ರಾಯರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಕನಕಾಭಿಷೇಕ ಮಂಗಳಾರತಿ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳು ಜರುಗಿದವು.

ಅ.15ರಂದು “ವಿಜಯ ದಶಮಿಯ”ಹಬ್ಬದ ಪ್ರಯುಕ್ತ ಸಾಮೂಹಿಕ ಶ್ರೀನಿವಾಸ ಕಲ್ಯಾಣ ಮಹೋತ್ಸವ ಮಠದ ಆವರಣದಲ್ಲಿ ಬೆಳಗ್ಗೆ 8 ಗಂಟೆ ವರೆಗೆ ನಡೆಯಲಿದೆ. ಆನ್‌ಲೈನ್‌ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲ ತಾಣಗಳ ಮೂಲಕ ಭಕ್ತರು ಭಾಗವಹಿಸ ಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ;- ಅನುದಾನ ಸೂಕ್ತ ಬಳಸಿ ಅರಣ್ಯ ಸಂರಕ್ಷಿಸಿ

ಶರನ್ನವರಾತ್ರಿ ಪ್ರಯುಕ್ತ ಬನಶಂಕರಿ ದೇವಾಲಯದಲ್ಲಿ ಕೂಡ ಗುರುವಾರ ವಿಶೇಷ ಪೂಜೆ ನಡೆಯಿತು.ಅಲ್ಲದೆ ಬನಶಂಕರಿ ಅಮ್ಮನವರಿಗೆ ಅರಿಶಿನ ಕುಂಕುಮ ಅಲಂ ಕಾರ, ಸಹಸ್ರಮೋದಕ ಗಣಪತಿ ಹೋಮ ಸೇರಿದಂತೆ ಮತ್ತಿತರ ಪೂಜಾ ದೇವಾಲಯದ ಅರ್ಚಕರು ಹೇಳಿದ್ದಾರೆ.

Advertisement

ಶರನ್ನವರಾತ್ರಿ ಪ್ರಯುಕ್ತ ಅ.15ರ ವರೆಗೂ ವಿವಿಧಾ ಅಲಂಕಾರಗಳು ದೇವರಿಗೆ ಅರ್ಪಿಸಲಾಗುವುದು ಎಂದು ಹೇಳಿದ್ದಾರೆ. ಚಿತ್ರಕಲಾ ಪರಿಷತ್ತಿನ ಗೊಂಬೆಗಳ ಮಾರಾಟ: ದಸರಾ ಹಬ್ಬದ ಹಿನ್ನೆಲೆಯಲ್ಲಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರದಿಂದ ಗೊಂಬೆಗಳ ಮಾರಾಟ ಮತ್ತು ಪ್ರದರ್ಶನ ಮೇಳ ಆರಂಭವಾಗಿದೆ. ಅ.17ರ ವರೆಗೂ ನಡೆಯಲಿದೆ.ಒಂದೇ ವೇದಿಕೆಯ ಅಡಿಯಲ್ಲಿ ವಿಭಿನ್ನಲಿಯ ಗೊಂಬೆಗಳು ಗ್ರಾಹಕರಿಗೆ ದೊರೆಯಲಿವೆ.

ಇದರ ಜೊತೆಯಲ್ಲಿಯೇ ಹಬ್ಬಕ್ಕೆ ಬೇಕಾಗಿರುವ ಹಲವು ರೀತಿಯ ಸಾಮಗ್ರಿಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ. ಅಲಂಕಾರಿಕ ವಸ್ತುಗಳ ಜೊತೆಯಲ್ಲಿಯೇ ಮನೆ ಮಂದಿಗೆ ಬೇಕಾಗಿರುವ ಬಟ್ಟೆಗಳು ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಬಹುದಾಗಿದೆ.80ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇರಿಸಿದ್ದಾರೆ.ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಇಲ್ಲಿವೆ.

ಗೊಂಬೆಗಳ ಹಬ್ಬ

ದಸರಾ ಹಿನ್ನೆಲೆಯಲ್ಲಿ ತ್ಯಾಗರಾಜನಗರದ ವಿಜಯಲಕ್ಷೀ ರಿಗ್ರೇಟ್‌ ಅಯ್ಯರ್‌ ಅವರು ತಮ್ಮ ಮನೆಯಲ್ಲಿ ವಿವಿಧ ರೀತಿಯ ಗೊಂಬೆಗಳನ್ನು ಕೂರಿಸಿದ್ದು ಗಮನ ಸೆಳೆಯುತ್ತಿವೆ. ವಿಜಯನಗರದ ಅರಸರಾದ ಶ್ರೀಕೃಷ್ಣದೇವಾಲಯ ಮತ್ತು ಅವರ ಕುಟುಂಬ ವರ್ಗದ ( ರಾಣಿಯರು ಮತ್ತು ಸೈನಿಕರು)ಗೊಂಬೆಗಳನ್ನು ಇರಿಸಿದ್ದಾರೆ. ಹಾಗೆಯೇ ವಜ್ರಾಂಗಿ ಅಲಂಕೃತ ಲಕ್ಷೀ ನಾರಾಯಣ, ವಿರೂಪಾಕ್ಷಿ ಸ್ವಾಮಿ ಮತ್ತು ಅಮ್ಮನವರ ಗೊಂಬೆ ಕೂಡ ಕೂರಿಸಲಾಗಿದೆ. ಕಳೆದ 34 ವರ್ಷಗಳಿಂದ ಗೊಂಬೆಗಳನ್ನು ಕೂರಿಸುತ್ತಾ ಬಂದಿರುವುದಾಗಿ ವಿಜಯ ಲಕ್ಷೀ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next