Advertisement

ದೇಗುಲ ಧರ್ಮ ಜಾಗೃತಿ ಕೇಂದ್ರ: ವಜ್ರದೇಹಿ ಶ್ರೀ

11:50 AM May 10, 2017 | |

ಬಜಪೆ: ದೇವಸ್ಥಾನಗಳಿಂದ ಧರ್ಮ ರಕ್ಷಣೆ ಸಾಧ್ಯ. ದೇಗುಲಗಳು ನಮ್ಮ ಧರ್ಮದ ರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕೇಂದ್ರಗಳಾಗಿವೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ತಲಕಳ ಶ್ರೀ ಕಾಶೀವಿಶ್ವನಾಥೇಶ್ವರ ಬಲಮುರಿ ಶ್ರೀ ಮಹಾಗಣಪತಿ ದೇವ ಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶದ ಪ್ರಯುಕ್ತ ಸೋಮವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

Advertisement

ಕಟೀಲು ದೇಗುಲದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಅಧ್ಯಕ್ಷತೆ ವಹಿಸಿದ್ದ ವಿಶ್ವ ಹಿಂದೂ ಪರಿಷತ್‌ನ ಎಂ.ಬಿ. ಪುರಾಣಿಕ್‌ ಮಾತ ನಾಡಿದರು.  ಯುಪಿಸಿಎಲ್‌ನ ಕಾರ್ಯನಿರ್ವಾ ಹಕ ನಿರ್ದೇಶಕ ಕಿಶೋರ್‌ ಆಳ್ವ, ಕ್ಯಾಂಪ್ಕೋದ ಮ್ಯಾನೇಜಿಂಗ್‌ ಡೈರೆಕ್ಟರ್‌ ಸುರೇಶ್‌ ಭಂಡಾರಿ, ಶಾಸಕ ಬಿ.ಎ. ಮೊದಿನ್‌ ಬಾವಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಂದಾವರ ಗ್ರಾ.ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಧಾರ್ಮಿಕ ಮುಖಂಡ ಶೆಡೆಮಂಜುನಾಥ ಭಂಡಾರಿ, ಬ್ರಹ್ಮಕಲಶ ಸಮಿತಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜರಾಮ ಹೆಗ್ಡೆ ಕೊಲ್ಪೆ ಹಿರಿಯಡ್ಕ, ಕಾರ್ಯಾಧ್ಯಕ್ಷ ವಿನೋದರ ಪೂಜಾರಿ, ಭಜನ ಮಂಡಳಿ ಅಧ್ಯಕ್ಷ ಪದ್ಮನಾಭ, ಕೊಲ್ಪೆ ರಾಮಕೃಷ್ಣ ಆಳ್ವ ಉಪಸ್ಥಿತರಿದ್ದರು.

ಬಿ. ನಾಗರಾಜ ಶೆಟ್ಟಿ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ  ಕಾರ್ಯ ಕ್ರಮ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next