Advertisement

Vishnu Manchu: ‘ಕಣ್ಣಪ್ಪ’ ಚಿತ್ರೀಕರಣದ ವೇಳೆ ಅವಘಡ; ಆಸ್ಪತ್ರೆಗೆ ದಾಖಲಾದ ನಟ ವಿಷ್ಣು ಮಂಚು

11:08 AM Oct 30, 2023 | Team Udayavani |

ಚೆನ್ನೈ: ನಟ ವಿಷ್ಣು ಮಂಚು ಅವರ ಬಹು ನಿರೀಕ್ಷಿತ, ಬಿಗ್ ಬಜೆಟ್ ‘ಕಣ್ಣಪ್ಪ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ‌. ಸಿನಿಮಾದ ಚಿತ್ರೀಕರಣದ ವೇಳೆ ನಟ ವಿಷ್ಣು ಮಂಚು ಅವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

Advertisement

ಈಗಾಗಲೇ ತನ್ನ ಬಹು ತಾರಾಗಣದಿಂದಲೇ ಸದ್ದು ಮಾಡಿರುವ ‘ಕಣ್ಣಪ್ಪ’ ಚಿತ್ರೀಕರಣದ ಹಂತದಲ್ಲಿಯೂ ಸುದ್ದಿಯಾಗಿದೆ. ನಟ ವಿಷ್ಣು ‌ಮಂಚು ಅವರಿಗೆ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಗಾಯವಾಗಿದೆ ಎಂದು ವರದಿಯಾಗಿದೆ.

ಕಳೆದ ತಿಂಗಳಿನಿಂದಲೇ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ. ಇತ್ತೀಚೆಗೆ(ಅ.29 ರಂದು) ನಟ ವಿಷ್ಣು ಮಂಚು ಅವರ ಕೈಗೆ ಡ್ರೋಣ್ ಕ್ಯಾಮೆರಾದ ರೆಕ್ಕೆಯೊಂದು(ಬ್ಲೇಡ್) ತಾಗಿ ಏಟಾಗಿದೆ. ಡ್ರೋಣ್ ಬಳಸುವ ವೇಳೆ, ಡ್ರೋಣ್ ಬಳಸುವಾತನ ನಿಯಂತ್ರಣ ತಪ್ಪಿ ಡ್ರೋಣ್ ಕ್ಯಾಮರಾದ ರೆಕ್ಕೆ ವಿಷ್ಣು ಅವರ ಕೈಗೆ ತಾಗಿದ ಪರಿಣಾಮ ಅವರಿಗೆ ಗಾಯವಾಗಿದೆ. ಈ ಕಾರಣದಿಂದ ತಕ್ಷಣ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಡ್ರೋಣ್ ಕ್ಯಾಮರಾದ ಸಿಗ್ನಲ್ ಕೊರತೆಯಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

ಘಟನೆಯ ಪರಿಣಾಮ ವಿಷ್ಣು ಮಂಚು ಅವರ ಕೈ ಹಾಗೂ ಭುಜಕ್ಕೆ ಕೆಲ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಸಿನಿಮಾದಲ್ಲಿ ಪ್ರಭಾಸ್, ಮೋಹನ್ ಲಾಲ್, ಶಿವರಾಜ್ ಕುಮಾರ್ ನಯನಾತಾರ ಸೇರಿದಂತೆ ಅನೇಕ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Advertisement

ಬರೋಬ್ಬರಿ 100 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next