Advertisement

ರಹದಾರಿಯಲ್ಲಿ ಒಂದ್‌ ಕಥೆ ಹೇಳ್ಲಾ

04:54 PM Jun 13, 2019 | Lakshmi GovindaRaj |

ನಿರ್ದೇಶಕರಾದವರು ಮೊದಲ ಚಿತ್ರವಾದ ಬಳಿಕ ಎರಡನೇ ಚಿತ್ರ ಶುರು ಮಾಡುವುದು, ಅದು ಮುಗಿದ ಬಳಿಕ ಮೂರನೇ ಚಿತ್ರ ಶುರು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ನಿರ್ದೇಶಕ ತಮ್ಮ ಮೊದಲ ಚಿತ್ರವಾದ ಬಳಿಕ ಎರಡನೇ ಚಿತ್ರ ಶುರು ಮಾಡಬೇಕಿತ್ತು. ಆದರೆ ಅದಕ್ಕೂ ಮುನ್ನ ಮೂರನೇ ಚಿತ್ರ ಶುರು ಮಾಡಿದ್ದಾರೆ! ಅದು ಹೇಗೆ ಸಾಧ್ಯ ಅಂತೀರಾ? ಅದನ್ನ ಹೇಳುತ್ತೇವೆ ನೋಡಿ.

Advertisement

ನಿಮಗೆ “ಒಂದ್‌ ಕಥೆ ಹೇಳ್ಲಾ’ ಎನ್ನುವ ಚಿತ್ರ ನೆನಪಿರಬಹುದು. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾದ ಯುವ ಪ್ರತಿಭೆ ಗಿರೀಶ್‌ ವೈರಮುಡಿ ತಮ್ಮ ಮೊದಲ ಚಿತ್ರದಲ್ಲೇ ಗಮನ ಸೆಳೆದಿದ್ದರು. ಆ ಚಿತ್ರದ ಬಳಿಕ ಗಿರೀಶ್‌ “ರಹದಾರಿ’ ಎನ್ನುವ ಹೆಸರಿನಲ್ಲಿ ತಮ್ಮ ಎರಡನೇ ಚಿತ್ರವನ್ನು ಅನೌನ್ಸ್‌ ಮಾಡಿದ್ದರು.

ಚಿತ್ರದ ಟೈಟಲ್‌ ಪೋಸ್ಟರ್‌ ಕೂಡ ಬಿಡುಗಡೆ ಮಾಡಿದ್ದರು. ಆದರೆ ಈಗ “ರಹದಾರಿ’ ಚಿತ್ರಕ್ಕೂ ಮೊದಲೇ ತಮ್ಮ ಮೂರನೇ ಚಿತ್ರದ ಕೆಲಸಗಳನ್ನು ಆರಂಭಿಸಿದ್ದಾರೆ. ಹಾಗಾದರೆ, ಇದಕ್ಕೆ ಕಾರಣವೇನು? ಎನ್ನುವ ಪ್ರಶ್ನೆಗೆ ಉತ್ತರಿಸುವ ಗಿರೀಶ್‌, ‘ರಹದಾರಿ’ ಚಿತ್ರದ ಪ್ರೀ-ಪ್ರೊಡಕ್ಷನ್‌ಗೆ ಸಾಕಷ್ಟು ಸಮಯ ಬೇಕಾಗುತ್ತದೆ.

ಒಂದು ನೈಜ ಘಟನೆ ಆಧಾರವಾಗಿ ಇಟ್ಟುಕೊಂಡು ಇದನ್ನು ಮಾಡಲಾಗುತ್ತಿದೆ. ಸಾಕಷ್ಟು ಕುತೂಹಲಮೂಡಿಸುವ ಎಲ್ಲೂ ಹೆಚ್ಚು ಬೆಳಕಿಗೆ ಬಂದಿಲ್ಲದ ರಾಬರಿ ಕಥೆಯೊಂದು ಚಿತ್ರದಲ್ಲಿದೆ. ಹಾರರ್‌ ಶೈಲಿಯ ಆ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುವ ಪ್ಲಾನ್‌ ಇದೆ. ಹೀಗಾಗಿ, ಸದ್ಯಕ್ಕೆ ಚಿತ್ರದ ಪೋಸ್ಟರ್‌ ಬಿಟ್ಟು, ಟೈಟಲ್‌ ಅನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.

ಅಂದಹಾಗೆ, ಈ ಸಿನಿಮಾ 2020ಕ್ಕೆ ಈ ಸಿನಿಮಾ ಶುರು ಆಗಲಿದೆ. ಹಾಗಾಗಿ ಈ ಗ್ಯಾಪ್‌ನಲ್ಲಿ ಎರಡನೇ ಚಿತ್ರಕ್ಕೂ ಮೊದಲೇ ಮೂರನೇ ಚಿತ್ರವನ್ನು ಮಾಡುವ ಪ್ಲಾನ್‌ ಎನ್ನುತ್ತಾರೆ.  ಇನ್ನು ಈ ಹಿಂದೆ “ಒಂದ್‌ ಕಥೆ ಹೇಳ್ಲಾ’ ತಂಡವೇ ಈ ಸಿನಿಮಾದ ತಾಂತ್ರಿಕ ವರ್ಗದಲ್ಲೂ ಇರಲಿದ್ದು, ಇತಿಹಾಸ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಕೀತೇಶ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next