Advertisement

ಮಕ್ಕಳಿಗೆ ಬದುಕಿನ ಜ್ಞಾನ ತಿಳಿಸಿ

04:16 PM Nov 15, 2018 | |

ರಾಮನಗರ: ಮಕ್ಕಳಿಗೆ ಬದುಕಿನ ಜ್ಞಾನವನ್ನು ಕಲಿಸುವಂತೆ ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜ್‌ ಪೋಷಕರಿಗೆ ಸಲಹೆ ನೀಡಿದರು.

Advertisement

ನಗರದ ಶರತ್‌ ಮೆಮೋರಿಯಲ್‌ ಆಂಗ್ಲ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ, 63ನೇ ಕನ್ನಡ ರಾಜ್ಯೋತ್ಸವ, ಜಾನಪದ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಮಕ್ಕಳೇ ಅಭಿನಯಿಸಿದ ಕುರುಕ್ಷೇತ್ರ ಪೌರಾಣಿಕ ನಾಟಕದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೆಚ್ಚುಗೆ: ಮಕ್ಕಳು ಬೆಳೆದಂತೆಲ್ಲ ಪಠ್ಯಕ್ರಮದ ಜೊತೆಗೆ ಭವಿಷ್ಯವನ್ನು ಎದುರಿಸುವ ಬಗ್ಗೆಯೂ ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು. ಪ್ರಾಥಮಿಕ ಹಂತದ ಪ್ರೌಢವಾದ ನಾಟಕಗಳನ್ನು ಕರಗತ ಮಾಡಿಸಿ ಪ್ರದರ್ಶನ ಮಾಡಿಸುತ್ತಿರುವುದು ಸವಾಲಿನ ವಿಷಯ ಎಂದು ಶರತ್‌ ಶಾಲೆಯ ಶಿಕ್ಷಕರ ಮತ್ತು ಆಡಳಿತ ವರ್ಗದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ವಿರಳವಾಗುತ್ತಿದೆ. ಹಿಂದೆ ರಾತ್ರಿ ಇಡೀ ಪೌರಾಣಿಕ ನಾಟಕಗಳು ನಡೆಯುತ್ತಿದ್ದವು. ನಾಗರಿಕರು ಸಹ ಆಸಕ್ತಿಯಿಂದ ನೋಡುತ್ತಿದ್ದರು. ಪೌರಾಣಿಕ ನಾಟಕಗಳ ಪಾತ್ರಗಳನ್ನು ವಯಸ್ಕರು ನಿರ್ವಹಿಸುತ್ತಿದ್ದರು. ಇಂದು ಅದೇ ಪಾತ್ರಧಾರಿಗಳು, ಹಿರಿಯರಂತೆ ವೇಷಭೂಷಣ ತೊಡಿಸಿ, ಸಂಭಾಷಣೆಗಳನ್ನು ಶಾಲೆ ಕಟ್ಟಿ ಕೊಟ್ಟಿದೆ ಎಂದರು.
 
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್‌. ಕೆ.ಬೈರಲಿಂಗಯ್ಯ ಮಾತನಾಡಿ, ತಂತ್ರಜ್ಞಾನದ ಯುಗದಲ್ಲಿ ನಶಿಸುತ್ತಿರುವ ನಾಟಕ ಕಲೆ ಉಳಿಸಲು ಈ ಪ್ರಯತ್ನ ಮೆಚ್ಚುವಂತಹದ್ದು ಎಂದರು.

ಮಾದರಿ: ರಂಗಕಲೆಯ ಅರಿವೇ ಇಲ್ಲದ ವಯಸ್ಸಿನ ಮಕ್ಕಳಲ್ಲಿ ಪೌರಾಣಿಕ ನಾಟಕದಲ್ಲಿ ಬರುವ ವಿವಿಧ ಪಾತ್ರಗಳ ಅರಿವು ಮೂಡಿಸಿ, ಅವರಿಂದಲೇ ಪ್ರದರ್ಶನ ಮಾಡುವ ಕೆಲಸ ಜಿಲ್ಲೆಯಲ್ಲಿಯೇ ಇದು ಎರಡನೇ ಪ್ರದರ್ಶನವಾಗಿದ್ದು, ಜಿಲ್ಲೆಯಲ್ಲಿ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಎನ್‌.ರಾಜೇಶ್ವರಿ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಇನ್ನಿತರ ರಿದ್ದರು. ಭರತನಾಟ್ಯ ಕಲಾವಿದೆ ಕುಮಾರಿ ಕನ್ನಿಕಾ ಮತ್ತು ರಂಗನಿರ್ದೇಶಕ ಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು. ರಂಗನಿರ್ದೇಶಕ ಕೃಷ್ಣರಾಜು ನಾಟಕ ನಿರ್ದೇಶಿಸಿದರು. ಶ್ರೀಕೃಷ್ಣ, ಧರ್ಮರಾಯ, ಬಲರಾಮ, ಭೀಮ, ಅರ್ಜುನ, ದುರ್ಯೋಧನ, ದುಶ್ಯಾಸನ, ಸೈಂದವ, ಶಕುನಿ, ಕರ್ಣ, ಭೀಷ್ಮ, ಸೂತ್ರಧಾರಿ, ಶಿಖಂಡಿ, ಅಭಿಮನ್ಯು, ದ್ರೋಣಾಚಾರ್ಯ, ಸಹದೇವ, ಪಾತ್ರಗಳನ್ನು ಹಾಕಿದ್ದ ತಮ್ಮ ಮಕ್ಕಳನ್ನು ಕಂಡ ಪೋಷಕರು ಪುಳಕಿತರಾದರು. 

Advertisement

ನಾವು ಗಳಿಸಿರುವ ಜ್ಞಾನ ಮತ್ತು ಸಂಸ್ಕೃತಿ ಮಾತ್ರ ಶಾಶ್ವತವಾಗಿದೆ. ಆದರೆ ಬಹುಪಾಲು ಜನರು ಮಕ್ಕಳಿಗೆ ಅಗತ್ಯವಾಗಿರುವುದನ್ನು ಬಿಟ್ಟು ಉಳಿದೆಲ್ಲವನ್ನೂ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಏನು ಬೇಕು ಎಂಬುದನ್ನು ಅರಿತು ಪೌರಾಣಿಕ ನಾಟಕದ ಮೂಲಕ ಮಕ್ಕಳಿಗೆ ಜ್ಞಾನ ನೀಡುವ ಪ್ರಯತ್ನ ಮಾಡಲಾಗುತ್ತಿದೆ.
ಆದಿನಾರಾಯಣ ರೆಡ್ಡಿ, ಅಧ್ಯಕ್ಷ, ಶರತ್‌ ಮೆಮೋರಿಯಲ್‌ ಆಂಗ್ಲ ಶಾಲೆ

Advertisement

Udayavani is now on Telegram. Click here to join our channel and stay updated with the latest news.

Next