Advertisement

ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ: ರಾಮಲಿಂಗಾರೆಡ್ಡಿ

07:00 AM Jan 12, 2018 | Team Udayavani |

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ನಾಯಕರು ಹಾಗೂ ಸಚಿವರ ದೂರವಾಣಿ ಕದ್ದಾಲಿಕೆ ಹಲವಾರು ದಿನಗಳಿಂದ ನಡೆಯುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು,ದೂರವಾಣಿ ಕದ್ದಾಲಿಕೆ ಬಗ್ಗೆ ಮೊದಲಿನಿಂದಲೂ ನನಗೆ ಶಂಕೆಯಿತ್ತು. ಇದೀಗ ಅದು ನಿಜವಾಗಿದೆ. ದೂರವಾಣಿ ಕದ್ದಾಲಿಕೆಗೆ ನಮ್ಮ ಗಮನಕ್ಕೂ ಬಂದಿದೆ’ ಎಂದು ಹೇಳಿದರು.

ಚುನಾವಣಾ ವರ್ಷ ಆಗಿರುವುದರಿಂದ ಕೇಂದ್ರ ಸರ್ಕಾರದ ವತಿಯಿಂದಲೇ ದೂರವಾಣಿ ಕರೆಗಳ ಮಾಹಿತಿ ಪಡೆಯುತ್ತಿರಬಹುದು. ಆದರೂ, ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ದೂರು ನೀಡಲಾಗುವುದು. ದೂರವಾಣಿ ಕದ್ದಾಲಿಕೆ
ರಾಜಕೀಯ ಕಾರಣಗಳಿಗಾಗಿ ಮಾಡಿದರೆ ತಪ್ಪು. ಯಾವ ಪಕ್ಷ, ಸರ್ಕಾರವೇ ಆಗಲಿ ಆ ರೀತಿ ಮಾಡಬಾರದು ಎಂದು ಹೇಳಿದರು.

ಅಮಿತ್‌ ಶಾ ವಿರುದ್ಧ ವಾಗ್ಧಾಳಿ: ಈಸ್ಟ್‌ ಇಂಡಿಯಾ ಕಂಪನಿಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಗೂ ಏನೂ ವ್ಯತ್ಯಾಸ ಇಲ್ಲ. ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು,
“ನಾನು ಬಂದಿರೋದೇ ವ್ಯಾಪಾರ ಮಾಡೋಕೆ’ ಎಂದು ಅಮಿತ್‌ ಶಾ ಅವರೇ ಹೇಳಿದ್ದಾರೆ. ರಾಜ್ಯದ ಜನತೆಯನ್ನು ಹಣ ಕೊಟ್ಟು ಕೊಂಡುಕೊಳೆ¤àವೆ ಎಂಬ ಅಮಿತ್‌ ಶಾ ಕನಸು ಈಡೇರುವುದಿಲ್ಲ. ಜನರ ಮನಸ್ಸು ಗೆಲ್ಲದೆ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next