Advertisement

ಕೆರೆ ಗೇಟ್‌ ತೆರೆದು ಕುಡಿವ ನೀರು ಪೋಲು!

05:43 PM Apr 10, 2020 | Naveen |

ತೆಲಸಂಗ: ಕೆಲ ಕಿಡಿಗೇಡಿಗಳು ಗ್ರಾಮದ ಹೊರ ವಲಯದ ಕೆರೆಯ ಗೇಟ್‌ ಗಳನ್ನು ತೆರೆದು ನೀರು ಹರಿಬಿಟ್ಟ ಘಟನೆ ಬುಧವಾರ ತಡರಾತ್ರಿ ನಡೆದಿದೆ.

Advertisement

ತೆಲಸಂಗ ಸೇರಿದಂತೆ 4 ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ತಲೆದೋರಬಾರದು ಅನ್ನುವ ಕಾರಣಕ್ಕೆ ಕೆರೆಯಲ್ಲಿ ಉಳಿಸಿಕೊಂಡಿರುವ ಕೆರೆ
ನೀರನ್ನು ಹರಿಬಿಡುವ ಕೆಲಸ ಒಂದು ವಾರದಲ್ಲಿ ಮೂರು ಬಾರಿ ನಡೆದಿದೆ ಎನ್ನಲಾಗಿದೆ. ರಾತ್ರಿ ಹೊತ್ತು ನೀರು ಬಿಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ರಾತ್ರಿ ಸ್ಥಳಕ್ಕೆ ತೆಲಸಂಗ ಗ್ರಾಪಂ ಸಿಬ್ಬಂದಿ ಆಗಮಿಸುತ್ತಿದ್ದಂತೆ ಕಿಡಿಗೇಡಿಗಳು ಓಡಿ ಹೋಗಿದ್ದಾರೆ. ಸದ್ಯಕ್ಕೆ ಕೆರೆ ಕೆಳಭಾಗದ ಮತ್ತು ಸುತ್ತಲಿನ ರೈತರು ಬೇಕಂತಲೇ ಈ ಕೃತ್ಯ ಎಸಗುತ್ತಿದ್ದಾರೆ. ರಾತ್ರಿ ಹೊತ್ತು ಪಂಪ್‌ಸೆಟ್‌ ಬಳಸಿ ಮತ್ತು ವಾಲ್‌ ತಿರುವಿ ಹಾಗೂ ಒಡ್ಡ ಒಡೆದು ನೀರು ಬಿಟ್ಟುಕೊಳ್ಳುತ್ತಾರೆ ಅಂತ ಗೊತ್ತಿದ್ದರೂ ಅಂಥವರ ಮೇಲೆ ಪ್ರಕರಣ ದಾಖಲಿಸದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next