Advertisement

ನೆರಡಗಂ ಮಠಕ್ಕೆ ತೆಲಂಗಾಣ ಕೃಷಿ ಸಚಿವ ಭೇಟಿ

01:04 PM Dec 15, 2021 | Team Udayavani |

ಸೈದಾಪುರ: ಕರ್ನಾಟಕ-ತೆಲಂಗಾಣದ ಗಡಿಯಂಚಿನ ಭಕ್ತರ ಆರಾಧ್ಯ ಗುರು ಸಿದ್ಧಲಿಂಗೇಶ್ವರ ಶ್ರೀಗಳ ದರ್ಶನ ಮನಸ್ಸಿಗೆ ಖುಷಿ ತಂದಿದೆ ಎಂದು ತೆಲಂಗಾಣ ರಾಜ್ಯದ ಕೃಷಿ ಸಚಿವ ಸಿಂಗರೆಡ್ಡಿ ನಿರಂಜನರೆಡ್ಡಿ ಹೇಳಿದರು.

Advertisement

ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠಕ್ಕೆ ಭೇಟಿ ನೀಡಿದ ಸಚಿವರು ಸಿದ್ಧಲಿಂಗೇಶ್ವರ ಶ್ರೀಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಮಠಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೇ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಪ್ರಗತಿಗೆ ಶ್ರಮಿಸುತ್ತಿವೆ. ಸಮಾಜದ ಅಂಕುಡೊಂಕು ತಿದ್ದಿ ನವ ಸಮಾಜ ನಿರ್ಮಾಣ ಮಾಡುವಲ್ಲಿ ಪೂಜ್ಯರ ಕೊಡುಗೆ ಗಣನೀಯ ಎಂದರು.

ಇದೇ ಸಂದರ್ಭದಲ್ಲಿ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಸಚಿವರಿಗೆ ಶಾಲು ಹೊದಿಸಿ ಆಶೀರ್ವದಿಸಿದರು. ಮಖ್ತಲ್‌ ಶಾಸಕ ಚಿಟ್ಟೆಂ ರಾಮ ಮೋಹನರೆಡ್ಡಿ, ನಾರಾಯಣಪೇಟ ಜಿಪಂ ಅಧ್ಯಕ್ಷೆ ವನಜಮ್ಮ, ಶ್ರೀನಿವಾಸ ಗುಪ್ತಾ, ವೆಂಕಟರೆಡ್ಡಿ, ಅಶೋಕಗೌಡ, ತಾಪಂ ಸದಸ್ಯ ಯಲ್ಲಾರೆಡ್ಡಿ, ಈಶ್ವರಗೌಡ, ಶಿವರಾಜ ಪಾಟೀಲ್‌, ಮಹಿಪಾಲರೆಡ್ಡಿ, ಮಧುಸೂದನರೆಡ್ಡಿ, ನಾಗಪ್ಪ ಮಲ್ಲೆಪಲ್ಲಿ, ಮಲ್ಲಯ್ಯಸ್ವಾಮಿ, ಶರಣಪ್ಪ ಮಾಣಿಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next