Advertisement

Viral: ತಮ್ಮಂದಿರ ಕೈಗೆ ರಾಖಿ ಕಟ್ಟಿ ಕೊನೆಯುಸಿರೆಳೆದ ಅಕ್ಕ.. ಭಾವುಕ ಕ್ಷಣದ ವಿಡಿಯೋ ವೈರಲ್

02:50 PM Aug 19, 2024 | Team Udayavani |

ತೆಲಂಗಾಣ: ಎಲ್ಲೆಡೆ ರಕ್ಷಾ ಬಂಧನದ ಹಬ್ಬ ಮನೆಮಾಡಿದೆ. ಅಣ್ಣ – ತಂಗಿ ಪ್ರೀತಿಯ ಬಂಧವನ್ನು ನಮ್ಮಲ್ಲಿ ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಸಹೋದರರಿಗೆ ರಾಖಿ ಕಟ್ಟಿದ ಕೆಲವೇ ಗಂಟೆಗಳಲ್ಲಿ ಸಹೋದರಿಯೊಬ್ಬಳು ಕೊನೆಯುಸಿರೆಳೆದ ದಾರುಣ ಘಟನೆ ತೆಲಂಗಾಣದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ (ಹೈದರಾಬಾದ್‌ನಿಂದ ಸುಮಾರು 200 ಕಿ.ಮೀ ದೂರ) ಕುಟುಂಬವೊಂದರಲ್ಲಿ ರಕ್ಷಾ ಬಂಧನದ ದಿನವೇ ದುರಂತ ಘಟನೆ ನಡೆದಿದೆ.

ನರಸಿಂಹುಲಪೇಟ್ ಮಂಡಲದ ಬುಡಕಟ್ಟು ಕುಗ್ರಾಮದ ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿ ಕೊಡಾದ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯಾಗಿದ್ದಳು. ಯುವಕನೊಬ್ಬ ಆಕೆಯನ್ನು ಪ್ರೀತಿಸುವ ನೆಪದಲ್ಲಿ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಿರುಕುಳ ತಾಳಲಾರದೆ ಬಾಲಕಿ ತನ್ನ ಜೀವನವನ್ನೇ ಅಂತ್ಯಗೊಳಿಸಲು ನಿರ್ಧರಿಸಿ ವಿಷ ಸೇವಿಸಿದ್ದಾಳೆ.

ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆರೋಗ್ಯ ಹದಗೆಡುತ್ತಿದ್ದ ಬೆನ್ನಲ್ಲೇ  ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ತನ್ನ ಸಹೋದರರನ್ನು ಆಸ್ಪತ್ರೆಗೆ ಕರೆಸಿ ಅವರ ಕೈಗೆ ರಾಖಿ ಕಟ್ಟಿದ್ದಾಳೆ. ಹಣೆಗೆ ಮುತ್ತಿಟ್ಟು ತನ್ನ ಸಹೋದರರಿಗೆ ರಾಖಿ ಕಟ್ಟಿದ್ದಾಳೆ. ರಾಖಿ ಕಟ್ಟಿದ ಕೆಲವೇ ಗಂಟೆಗಳಲ್ಲಿ ಅಂದರೆ ಸೋಮವಾರ ಮುಂಜಾನೆ(ಆ.19ರಂದು) ಆಕೆ ಕೊನೆಯುಸಿರೆಳೆದಿದ್ದಾಳೆ.

Advertisement

ಸಹೋದರನಿಗೆ ರಾಖಿ ಕಟ್ಟಿದ ಭಾವನಾತ್ಮಕ ಕ್ಷಣ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕಿರುಕುಳ ನೀಡಿದ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿ ನರಸಿಂಹಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next