Advertisement

ತೆಲಂಗಾಣ: ಫ‌ಲಿತಾಂಶ ಎಡವಟ್ಟಿಗೆ 21 ಬಲಿ!

02:04 AM Apr 29, 2019 | sudhir |

ಹೈದರಾಬಾದ್‌: ತೆಲಂಗಾಣದಲ್ಲಿ ಎಪ್ರಿಲ್‌ 18ರಂದು ಪ್ರಕಟವಾದ ಪದವಿ ಪೂರ್ವ ಪರೀಕ್ಷೆ ಫ‌ಲಿತಾಂಶ ರಾಜ್ಯದ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಕಂಗೆಡಿಸಿದೆ. ಆಘಾತದಿಂದ ಚೇತರಿಸಿಕೊಳ್ಳಲಾಗದೆ ಈವರೆಗೆ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಪರೀಕ್ಷೆ ಬರೆದ 9 ಲಕ್ಷ ವಿದ್ಯಾರ್ಥಿ ಗಳ ಪೈಕಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕೆಲವು ಮಕ್ಕಳ ನಿಜವಾದ ಅಂಕ 99 ಆಗಿದ್ದರೂ ಅವರಿಗೆ ಬಂದ ಫ‌ಲಿತಾಂಶದಲ್ಲಿ ಎರಡು ಸೊನ್ನೆಗಳಿದ್ದವು!

Advertisement

ಸದ್ಯ ತೆಲಂಗಾಣ ಮಾಧ್ಯಮಿಕ ಶಿಕ್ಷಣ ಮಂಡಳಿ ಮತ್ತು ಸರಕಾರ ತಪ್ಪನ್ನು ಒಪ್ಪಿಕೊಂಡಿದ್ದು, ತನಿಖೆಗೆ ಆದೇಶಿಸಲಾಗಿದೆ. ತನಿಖೆಯ ಪ್ರಾಥಮಿಕ ವರದಿಯಲ್ಲಿ ತಾಂತ್ರಿಕ ಮತ್ತು ಮಾನವ ದೋಷಗಳಿವೆ ಎಂಬುದು ಸಾಬೀತಾಗಿದೆ. ಆದರೆ ಕೆಲವೇ ವಿದ್ಯಾರ್ಥಿಗಳ ಫ‌ಲಿ ತಾಂಶದ ಮೇಲೆ ಇದು ಪರಿಣಾಮ ಉಂಟು ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈಗ ಉತ್ತರಪತ್ರಿಕೆಗಳನ್ನು ಉಚಿತವಾಗಿ ಮರು ಮೌಲ್ಯಮಾಪನ ನಡೆಸಲು ನಿರ್ಧರಿಸಲಾಗಿದ್ದು, ಈಗಾಗಲೇ ಆರಂಭವಾಗಿದೆ.

ಈ ಸಂಬಂಧ ರಾಜ್ಯದ ವಿವಿಧೆಡೆ ಪಾಲಕರು ಪ್ರತಿ ಭಟನೆ ನಡೆಸಿದ್ದಾರೆ. ಶಿಕ್ಷಣ ಸಚಿವ ಜಗದೀಶ್‌ ರೆಡ್ಡಿ ರಾಜೀ  ನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ. ಆತ್ಮ ಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದೂ ಆಗ್ರಹಿಸಲಾಗಿದೆ.

ಎಡವಟ್ಟು ಒಂದೆರಡಲ್ಲ
ಮೊದಲ ಬಾರಿ ಪ್ರಕಟವಾದ ಫ‌ಲಿತಾಂಶದಲ್ಲಿ ಹಲವರಿಗೆ ತಪ್ಪು ಅಂಕಗಳನ್ನು ನೀಡಿರುವುದು ಮರುಮೌಲ್ಯಮಾಪನದ ವೇಳೆ ತಿಳಿದುಬಂದಿದೆ. ಪರೀಕ್ಷೆಗೆ ಹಾಜರಾದರೂ ಫ‌ಲಿತಾಂಶದಲ್ಲಿ ಗೈರು ಎಂದು ನಮೂದಿಸಿರುವುದು ಮತ್ತು ಮೊದಲ ವರ್ಷದಲ್ಲಿ ಪಾಸಾಗಿದ್ದರೂ ಎರಡೂ ವರ್ಷಗಳ ಸಂಯೋಜಿತ ಫ‌ಲಿತಾಂಶ ನೀಡುವಾಗ ಫೇಲ್‌ ಎಂದು ನಮೂದಿಸಿರುವುದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next