Advertisement

ದಿಲ್ಲಿ : ಮನೆ ಕಳವಿಗೆ ಬಂದ ಯುವಕನನ್ನು ಸ್ಥಳೀಯರು ಚಚ್ಚಿ ಕೊಂದರು

12:20 PM Sep 04, 2018 | Team Udayavani |

ಹೊಸದಿಲ್ಲಿ : ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ ಹದಿಹರೆಯದ ಯುವಕನನ್ನು ಸ್ಥಳೀಯರು ಇಂದು ಮಂಗಳವಾರ ನಸುಕಿನ ವೇಳೆ ಹೊಡೆದು ಕೊಂದ ಘಟನೆ ವಾಯವ್ಯ ದಿಲ್ಲಿಯ ಮುಕುಂದಪುರದಲ್ಲಿ  ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

16 ವರ್ಷ ಪ್ರಾಯದ ಹುಡುಗನೋರ್ವ ಅಮೂಲ್ಯ ಸೊತ್ತುಗಳನ್ನು ಕದಿಯುವ ಸಲುವಾಗಿ ಮನೆಯೊಂದನ್ನು ಪ್ರವೇಶಿಸಿದ್ದ. ಮನೆ ಮಾಲಕರು ಆತನನ್ನು ಹಿಡಿದರು. ಸ್ಥಳೀಯರು ಹುಡುಗನನ್ನು ಹೊಡೆದು ಕೊಂದರು ಎಂದು ಪೊಲೀಸ್‌ ಡೆಪ್ಯುಟಿ ಕಮಿಷನರ್‌ (ವಾಯವ್ಯ) ಅಸ್ಲಾಂ ಖಾನ್‌ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಭಲಾಸ್ವಾ ಡೈರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಖಾನ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next