Advertisement

ಸ್ಮಾರ್ಟ್‌ ಫೋನ್‌ ಕೊಡದ ಗೆಳೆಯನನ್ನು ಕೊಂದು ಸುಟ್ಟ ತರುಣ

04:31 PM Jul 17, 2018 | udayavani editorial |

ಹೈದರಾಬಾದ್‌ : ಹದಿನೇಳು ವರ್ಷ ಪ್ರಾಯದ ತನ್ನ ನೆರೆಮನೆಯ ಸ್ನೇಹಿತನನ್ನು ಆತ ಕೊಡಲು ನಿರಾಕರಿಸಿದ ಸ್ಮಾರ್ಟ್‌ ಫೋನಿಗಾಗಿ, 19 ವರ್ಷದ ತರುಣನೋರ್ವ ಆತನನ್ನು ಕೊಂದು ಬಳಿಕ ಮೃತದೇಹದ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಹೈದರಾಬಾದ್‌ ಪೊಲೀಸರು ಆರೋಪಿ ತರುಣನನ್ನು ಸೆರೆ ಹಿಡಿದಿದ್ದಾರೆ. 

Advertisement

ಬಂಧಿತ ಕೊಲೆಗಾರ ತರುಣನನ್ನು ಜಿ ಪ್ರೇಮ್‌ ಸಾಗರ್‌ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತನಾಗಿರುವ ನೆರೆಮನೆಯ ಡಿ ಪ್ರೇಮ್‌ ಎಂಬಾತನನ್ನು ಅದಿಬಾತ್ಲಾ ದ ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ಆತನನ್ನು ದೊಣ್ಣೆಯಿಂದ ತಲೆಗೆ ಹೊಡೆದು ಕೊಂದು ಪೆಟ್ರೋಲ್‌ ಸುರಿದು ಸುಟ್ಟಿದ್ದಾನೆ ಎಂದು ಎಸಿಪಿ ಮಲ್ಕಾಗಿರಿ ತಿಳಿಸಿದ್ದಾರೆ. 

ಪ್ರೇಮ್‌ ನ ಮನೆಯವರು ಕಳೆದ ಜುಲೈ 14ರಂದು ಆತ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶಂಕಿತ ಸಾಗರ್‌ನನ್ನು ಹಿಡಿದು ಪ್ರಶ್ನಿಸಿದಾಗ ಆತ ತಾನು ಪ್ರೇಮ್‌ ನನ್ನು ಆತ ತನಗೆ ಕೊಡಲು ನಿರಕಾರಿಸಿದ್ದ ಆತನ ಸ್ಮಾರ್ಟ್‌ ಫೋನಿಗಾಗಿ ಕೊಂದು ಸುಟ್ಟಿದ್ದು ಹೌದೆಂದು ಒಪ್ಪಿಕೊಂಡ. 

Advertisement

Udayavani is now on Telegram. Click here to join our channel and stay updated with the latest news.

Next