Advertisement

ಬೆಳೆ ವಿಮೆ ಕಂತು ಭರಿಸಲು ತಾಂತ್ರಿಕ ಸಮಸ್ಯೆ ಅಡ್ಡಿ

04:42 PM Jul 10, 2020 | Suhan S |

ತೆಲಸಂಗ: ಪ್ರಧಾನ ಮಂತ್ರಿ ಫಸಲ್‌ ಬೀಮಾ ಯೋಜನೆಯಡಿ ಮುಂಗಾರು ಹಂಗಾಮಿಗೆ ಸಾಮಾನ್ಯ ಸೇವಾ ಕೇಂದ್ರದ ಮೂಲಕ ವಿಮೆ ಕಂತು ಭರಿಸಲು ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಸೇವೆ ಒದಗಿಸಲು ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿ ನಿರಾಕರಿಸುತ್ತಿರುವುದು ರೈತರಿಗೆ ಸಮಸ್ಯೆಯಾಗಿದೆ.

Advertisement

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿಮೆ ತುಂಬಲು ನೂಕು ನುಗ್ಗಲು ಇದ್ದ ಕಾರಣ ಖಾಸಗಿ ಸೇವಾ ಕೇಂದ್ರಗಳಿಗೆ ಆನ್‌ ಲೈನ್‌ ಅರ್ಜಿ ಪಡೆಯಲು ಅನುಮತಿ ನೀಡಲಾಗಿದೆ. ಆದರೆ ತಾಂತ್ರಿಕ ತೊಂದರೆಯಿಂದ ಕಂತು ತುಂಬಲು ಸಾಧ್ಯವಾಗುತ್ತಿಲ್ಲ.

ಏನಾಗುತ್ತಿದೆ: ಆನ್‌ಲೈನ್‌ ಅರ್ಜಿ ತುಂಬಿದಾಗ ಸೇವಾ ಕೇಂದ್ರದ ಖಾತೆಯಿಂದ ಹಣ ಕಡಿತವಾಗುತ್ತದೆ. ದೃಶೀಕರಣ ಚೀಟಿ ಸೊರೆತ ನಂತರ ರೈತರು ಕೇಂದ್ರದವರಿಗೆ ಹಣ ಕೊಡುತ್ತಾರೆ. ಆದರೆ ಈಗ ಹಣ ಕಡಿತಗೊಂಡರೂ ಸ್ವೀಕೃತಿ ಪಾವತಿ ಬರುತ್ತಿಲ್ಲ. ಇದರಿಂದ ಸೇವಾ ಕೇಂದ್ರದಸಿಬ್ಬಂದಿ ಕಂಗಾಲಾಗಿದ್ದಾರೆ. ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸದೆ ಅವರು ರೈತರಿಂದ ವಿಮೆ ಸಂಗ್ರಹಿಸಲು ಸಾಧ್ಯವಿಲ್ಲ ಮತ್ತು ಸೇವಾ ಕೇಂದ್ರದ ಸಿಬ್ಬಂದಿಗೆ ತೊಂದರೆ ತಪ್ಪಿದ್ದಲ್ಲ. ಈ ಹಣ ಮರಳಿ ದೊರಕುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಈವರೆಗೆ ಸೇವಾ ಕೇಂದ್ರಗಳ ಖಾತೆಯಿಂದ ಅಥಣಿ ತಾಲೂಕು ಒಂದರಲ್ಲಿಯೇ 8.5 ಲಕ್ಷ ಕಡಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next