Advertisement

ಸಮರ ವೀರ ಸಿಂಗ್‌ಗೆ ಕಣ್ಣೀರ ವಿದಾಯ

07:20 AM Sep 19, 2017 | Team Udayavani |

ನವದೆಹಲಿ: ಎರಡು ದಿನಗಳ ಹಿಂದೆ ನಿಧನರಾದ ವಾಯುಪಡೆ ಮಾರ್ಷಲ್‌ ಅರ್ಜನ್‌ ಸಿಂಗ್‌ ಅವರ ಅಂತ್ಯಸಂಸ್ಕಾರ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ದೆಹಲಿಯ ಬ್ರಾರ್‌ ಸ್ಕ್ವೇರ್‌ನಲ್ಲಿ ನೆರವೇರಿತು. 1965ರ ಭಾರತ-ಪಾಕ್‌ ಯುದ್ಧದಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಮೂಲಕ ವಿಜಯಪತಾಕೆ ಹಾರಿಸಿದ್ದ ಸಮರ ವೀರನಿಗೆ ಸೇನೆಯ ಹಿರಿಯ ಅಧಿಕಾರಿಗಳು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಪ್ರಮುಖ ರಾಜಕಾರಣಿಗಳು ಹಾಗೂ ಗಣ್ಯರು ಅಂತಿಮ ನಮನ ಸಲ್ಲಿಸಿದರು. 17 ಗನ್‌ ಸೆಲ್ಯೂಟ್‌ ಹಾಗೂ ವಾಯುಪಡೆಯ ಸುಖೋಯ್‌ ಯುದ್ಧ ವಿಮಾನ ಮತ್ತು ಐಎಎಫ್ ಮಿ-17 ವಿ5 ಹೆಲಿಕಾಪ್ಟರ್‌ ಹಾರಾಟದ ಮೂಲಕ ಹುತಾತ್ಮ ಸಿಂಗ್‌ಗೆ ಗೌರವ ಸಲ್ಲಿಸಲಾಯಿತು. ದೆಹಲಿಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ತ್ರಿವರ್ಣ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಯಿತು. ಶನಿವಾರ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅರ್ಜನ್‌ ಸಿಂಗ್‌ ಅವರು ನಿಧನರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next