Advertisement
ಗೆಲುವಿಗೆ 352 ರನ್ನುಗಳ ಬೃಹತ್ ಗುರಿ ಬೆನ್ನಟ್ಟುತ್ತಿರುವ ರಾಜ್ಯ ತಂಡ, 3ನೇ ದಿನದಾಟದ ಕೊನೆಯಲ್ಲಿ 98 ರನ್ನಿಗೆ 3 ವಿಕೆಟ್ ಕಳೆದುಕೊಂಡಿದೆ.
Related Articles
ಕರ್ನಾಟಕಕ್ಕೆ ದ್ವಿತೀಯ ಇನ್ನಿಂಗ್ಸ್ನಲ್ಲೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ ಅವರ ಮತ್ತೂಂದು ವೈಫಲ್ಯ ಗಂಡಾಂತರವಾಗಿ ಪರಿಣಮಿಸಿತು. ದ್ವಿತೀಯ ಎಸೆತದಲ್ಲಿ, ಖಾತೆ ತೆರೆಯುವ
ಮೊದಲೇ ರಾಹುಲ್ ಪೆವಿಲಿಯನ್ ಕಡೆಗೆ ನಡೆದರು. ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಕಿತ್ತು ನಡುಗಿಸಿದ್ದ ಇಶಾನ್ ಪೊರೆಲ್ ಅಪಾಯಕಾರಿ ಬ್ಯಾಟ್ಸ್ಮನ್ ರಾಹುಲ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿದರು.
Advertisement
ಮತ್ತೋರ್ವ ಆರಂಭಿಕ ಬ್ಯಾಟ್ಸ್ಮನ್ ಆರ್. ಸಮರ್ಥ್ (27) ತಂಡದ ಮೊತ್ತ 57 ರನ್ ಆಗಿದ್ದಾಗ ಆಕಾಶ್ ದೀಪ್ ಎಸೆತದಲ್ಲಿ ಎಲ್ಬಿ ಆಗಿ ಹೊರನಡೆದರು. ತಂಡದ ಸ್ಕೋರ್ 76ಕ್ಕೆ ಏರಿದಾಗ ಕೇವಲ 6 ರನ್ ಗಳಿಸಿದ್ದ ಕರುಣ್ ನಾಯರ್ ಕೂಡ ಔಟಾದರು. ಮುಕೇಶ್ ಎಸೆತದಲ್ಲಿ ಎಲ್ಬಿ ಬಲೆಗೆ ಬೀಳುವುದರೊಂದಿಗೆನಾಯಕನ ಬ್ಯಾಟಿಂಗಿಗೆ ತೆರೆಬಿತ್ತು. ಹೀಗೆ ಕರ್ನಾಟಕದ ಮೂವರೂ ಲೆಗ್ ಬಿಫೋರ್ ಮೂಲಕವೇ ವಿಕೆಟ್ ಕಳೆದುಕೊಂಡದ್ದು ವಿಪರ್ಯಾಸ. ಬಂಗಾಲ 161ಕ್ಕೆ ಆಲೌಟ್
ಇದಕ್ಕೂ ಮೊದಲು 4ಕ್ಕೆ 72 ರನ್ ಗಳಿಸಿದಲ್ಲಿಂದ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಬಂಗಾಲ 161ಕ್ಕೆ ಆಲೌಟ್ ಆಯಿತು. ಒಟ್ಟು ಮುನ್ನಡೆ 350ರ ಗಡಿ ದಾಟಿತು. ಸುದೀಪ್ ಚಟರ್ಜಿ (45), ಅನುಸ್ತೂಪ್ ಮಜುಮಾರ್ (41) ಹಾಗೂ ಶಾಬಾಜ್ ಅಹ್ಮದ್ (31) ಉತ್ತಮ ಆಟ ಪ್ರದರ್ಶಿಸಿದರು. ರಾಜ್ಯದ ಪರ ಅಭಿಮನ್ಯು ಮಿಥುನ್ 4, ಕೆ. ಗೌತಮ್ 3, ರೋನಿತ್ ಮೋರೆ 2 ಹಾಗೂ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಉರುಳಿಸಿದರು ಸಂಕ್ಷಿಪ್ತ ಸ್ಕೋರ್
ಬಂಗಾಲ-312 ಮತ್ತು 161 (ಸುದೀಪ್ 45, ಮಜುಮಾªರ್ 41, ಶಾಬಾಜ್ 31, ಮಿಥುನ್ 23ಕ್ಕೆ 4, ಕೆ. ಗೌತಮ್ 15ಕ್ಕೆ 3, ಮೋರೆ 56ಕ್ಕೆ 2, ಪ್ರಸಿದ್ಧ್ ಕೃಷ್ಣ 45ಕ್ಕೆ 1).
ಕರ್ನಾಟಕ-122 ಮತ್ತು 3 ವಿಕೆಟಿಗೆ 98 (ಪಡಿಕ್ಕಲ್ ಬ್ಯಾಟಿಂಗ್ 50, ಸಮರ್ಥ್ 27, ಪಾಂಡೆ ಬ್ಯಾಟಿಂಗ್ 11).