Advertisement

ಜುಲೈನಲ್ಲಿ ಆರು ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ

08:33 AM May 17, 2020 | keerthan |

ಮುಂಬೈ: ಕೋವಿಡ್-19 ಕಾರಣದಿಂದ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ಥಬ್ಧವಾಗಿದೆ. ಕೋವಿಡ್-19 ವೈರಸ್ ಅಲ್ಲದಿದ್ದರೆ, ಈ ಕಾಲದಲ್ಲಿ ಭಾರತದಲ್ಲಿ ವರ್ಣರಂಜಿತ ಐಪಿಎಲ್ ನಡೆಯಬೇಕಿತ್ತು. ಆದರೆ ಸದ್ಯ ಯಾವ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತಿಲ್ಲ. ಆಟಗಾರರೆಲ್ಲರೂ ತಮ್ಮ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

Advertisement

ಆದರೆ ಸದ್ಯ ಕ್ರಿಕೆಟ್ ಚಟುವಟಿಕೆಯನ್ನು ಆರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಶ್ರೀಲಂಕಾದಲ್ಲಿ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯವಾಡಲು ಮಾತುಕತೆಗಳು ನಡೆಯುತ್ತಿದೆ. ಆದರೆ ಅದಕ್ಕೆ ಸರಕಾರ ಒಪ್ಪಿಗೆ ಪಡೆಯಬೇಕಷ್ಟೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಈ ಬಗ್ಗೆ ಪತ್ರ ಬರೆದಿದ್ದು, ಆರು ಪಂದ್ಯಗಳನ್ನು ನಡೆಸಲು ಉತ್ಸುಕವಾಗಿದೆ. ಕ್ವಾರಂಟೈನ್ ನಿಯಮಗಳನ್ನು ಪಾಲಿಸಿ ಜುಲೈ ಅಂತ್ಯದಲ್ಲಿ ಸರಣಿ ನಡೆಸಬಹುದು ಎಂದಿದೆ.

ಇದಕ್ಕೆ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಉತ್ತರಿಸಿದ್ದು, ಒಂದು ವೇಳೆ ಸರಕಾರ ಒಪ್ಪಿಗೆ ಸೂಚಿಸಿದರೆ, ಆಟಗಾರರ ರಕ್ಷಣೆಯೊಂದಿಗೆ ನಾವು ಲಂಕೆಗೆ ಪ್ರವಾಸ ಮಾಡಲು ಸಿದ್ದರಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next