Advertisement

Team India ಪಾಂಡ್ಯಗಿಂತ ಸೂರ್ಯಕುಮಾರ್‌ ಮೇಲೆ ಆಟಗಾರರಿಗೆ ಹೆಚ್ಚು ನಂಬಿಕೆ?

11:14 PM Jul 19, 2024 | Team Udayavani |

ಹೊಸದಿಲ್ಲಿ: ಶ್ರೀಲಂಕಾ ಪ್ರವಾಸದ ವೇಳೆ ಭಾರತದ ಟಿ20 ತಂಡಕ್ಕೆ ನಾಯಕರಾಗಿ ಸೂರ್ಯಕುಮಾರ್‌ ಯಾದವ್‌ ಅವರನ್ನು ನೇಮಿಸಲಾಗಿದೆ. ಮುಂದಿನ ದಿನಗಳಲ್ಲೂ ಚುಟುಕು ಕ್ರಿಕೆಟ್‌ ಮಾದರಿಗೆ ಸೂರ್ಯ ಅವರೇ ನಾಯಕರಾಗಿ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ತಂಡದ ಹೆಚ್ಚಿನ ಆಟಗಾರರಿಗೆ ಹಾರ್ದಿಕ್‌ ಪಾಂಡ್ಯ ಅವರಿಗಿಂತ ಸೂರ್ಯಕುಮಾರ್‌ ಮೇಲೆ ಹೆಚ್ಚಿನ ನಂಬಿಕೆಯಿರುವುದೇ ಇದಕ್ಕೆ ಕಾರಣ ಎಂದು ವರದಿಗಳು ಹೇಳಿವೆ.

Advertisement

ಟಿ20 ತಂಡದ ನಾಯಕತ್ವ ಹಾರ್ದಿಕ್‌ ಪಾಂಡ್ಯ ಪಾಲಾಗಲಿದೆ ಎಂದು ಸುದ್ದಿಗಳು ಹರಿದಾಡಿತ್ತಾದರೂ, ಸೂರ್ಯ ಆಯ್ಕೆ ಕ್ರಿಕೆಟ್‌ ಅಭಿಮಾನಿಗಳನ್ನು ಅಚ್ಚರಿಯಲ್ಲಿ ಕೆಡವಿದೆ. ಆದರೆ ಹಾರ್ದಿಕ್‌ ಮೇಲೆ ಆಟಗಾರರಿಗೆ ಹೆಚ್ಚಿನ ನಂಬಿಕೆ ಇಲ್ಲದಿರುವುದರಿಂದ ಈ ಬೆಳವಣಿಗೆಯಾಗಿದೆ ಎನ್ನಲಾಗುತ್ತಿದೆ.

ಕಳೆದ ವರ್ಷ ಬೆನ್ನುನೋವಿಗೆ ತುತ್ತಾಗುವ ಮುನ್ನ ಪಾಂಡ್ಯ ಅವರೇ ಭಾರತ ಟಿ20 ತಂಡವನ್ನು ಮುನ್ನಡೆಸಿದ್ದರು. ಟಿ20 ವಿಶ್ವಕಪ್‌ ವೇಳೆ ತಂಡದ ಉಪನಾಯಕರಾಗಿದ್ದು, ಗೆಲುವಿನ ರೂವಾರಿಯಾಗಿ ದ್ದರು. ಆದರೂ ಪಾಂಡ್ಯ ಅವರಿಗೆ ನಾಯಕತ್ವದ ವಿಚಾರದಲ್ಲಿ ಭಾರೀ ಹಿನ್ನಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next