Advertisement

ಕುಕ್ಕೆಗೆ ಟೀಂ ಇಂಡಿಯಾ ಕೋಚ್‌ ರವಿಶಾಸ್ತ್ರೀ 

10:40 AM May 24, 2018 | |

ಸುಬ್ರಹ್ಮಣ್ಯ : ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬುಧವಾರ ಟೀಂ ಇಂಡಿಯಾದ ಕೋಚ್‌ ರವಿಶಾಸ್ತ್ರೀ ಭೇಟಿ ನೀಡಿದರು.
ಆರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರುಶನ ಪಡೆದರು. ದೇವಸ್ಥಾನದಲ್ಲಿ ಅರ್ಚಕರು ಅವರಿಗೆ ಶಾಲು ಹೊದೆಸಿ, ಮಹಾಪ್ರಸಾದ ನೀಡಿ, ಹರಸಿದರು. ಬಳಿಕ ಅವರು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿದರು. ಮಠ ದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ರವಿಶಾಸ್ತ್ರೀ  ಅವರಿಗೆ ಶಾಲು ಹೊದೆಸಿ, ಫ‌ಲ ಮಂತ್ರಾಕ್ಷತೆ ನೀಡಿದರು.

Advertisement

ಇವರೊಂದಿಗೆ ಉಡುಪಿಯ ಲಾತವೀಯ ಆಚಾರ್‌, ವಾದಿರಾಜ ಪಿಜತ್ತಾಯ ಉಡುಪಿ ಆಗಮಿಸಿದ್ದರು. ಮಠದ ಗುರುಪ್ರಸಾದ್‌ ಭಟ್‌, ರವೀಂದ್ರ ಭಟ್‌, ವೇಣುಗೋಪಾಲ ಶಾಸ್ತ್ರೀ , ರಾಜಶೇಖರ ಭಟ್‌, ಪ್ರಜ್ವಲ್‌ ಭಟ್‌, ಕುಕ್ಕೆ ದೇವಸ್ಥಾನದ ನಿವೃತ್ತ ಶಿಷ್ಟಾಚಾರ ಅಧಿಕಾರಿ ಎ. ವೆಂಕಟ್ರಾಜ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next