Advertisement

Team India: ಮುಂಬೈಯಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!

11:05 PM Jul 04, 2024 | Team Udayavani |

ಮುಂಬೈ: ಎಲ್ಲೆಲ್ಲೂ ನೀಲಿ ಬಣ್ಣದ ಜರ್ಸಿಯ ಕಲರವ, ಕ್ರಿಕೆಟ್‌ ಪ್ರಿಯರ ಸಂಭ್ರಮ, ಸಮುದ್ರದ ಅಲೆಗಳ ನಡುವೆಯೇ ತ್ರಿವರ್ಣ ಧ್ವಜ ಹಿಡಿದ ಜನರ ಸಡಗರ, ಘೋಷಣೆ… ಇದು ನಗರದ ಮರೀನಾ ಡ್ರೈವ್‌ ಬಳಿ ಕಂಡು ಬಂದ ದೃಶ್ಯಗಳು..

Advertisement

ಟಿ 20 ವಿಶ್ವಕಪ್  ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿ 17 ವರ್ಷ ಬಳಿಕ 2ನೇ ಬಾರಿ ಚಾಂಪಿಯನ್‌ ಆಗಿ ವೆಸ್ಟ್‌ಇಂಡೀಸ್‌ನ ಬಾರ್ಬೊಡಸ್‌ನಿಂದ ಟ್ರೋಫಿ ಜೊತೆಗೆ ಆಗಮಿಸಿದ ಭಾರತ ಕ್ರಿಕೆಟ್‌ ತಂಡಕ್ಕೆ ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್‌ ಅಭಿಮಾನಿಗಳು ಭರ್ಜರಿ ಸ್ವಾಗತವನ್ನೇ ನೀಡಿದ್ದಾರೆ.

ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ಮೆರವಣಿಗೆ

ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಳಿಕ ಮುಂಬೈಗೆ ಆಗಮಿಸಿದ ಭಾರತ ತಂಡದ ಆಟಗಾರರು ಮರೀನಾ ಡ್ರೈವ್‌ ಬಳಿ ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ವಿಶ್ವಕಪ್‌ ಟ್ರೋಫಿ ಹಿಡಿದು ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಬೂಮ್ರಾ, ಪಾಂಡ್ಯ, ಕೋಚ್‌ ರಾಹುಲ್‌ ದ್ರಾವಿಡ್‌ ಸೇರಿದಂತೆ ಎಲ್ಲ ಆಟಗಾರರು ವಿಜಯಯಾತ್ರೆಯ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳು ಘೋಷಣೆ ಕೂಗಿ ಅಭಿನಂದನೆಗಳ ಸಲ್ಲಿಸಿದರು. ನಾಯಕ ರೋಹಿತ್‌ ಶರ್ಮಾ, ಕೋಚ್‌ ರಾಹುಲ್‌ ದ್ರಾವಿಡ್‌ ಇಬ್ಬರೂ ಅಪ್ಪಿಕೊಂಡು ಸಂಭ್ರಮಿಸಿದ್ದು ಅಭಿಮಾನಿಗಳ ಕಣ್ಣುಸೆಳೆಯಿತು.

 

Advertisement


ವಾಂಖೆಡೆಯಲ್ಲಿ ಅಭಿನಂದನಾ ಸಮಾರಂಭ:

ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆಯಿಂದಲೇ ಜಮಾಯಿಸಿ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ಕ್ರಿಕೆಟ್​ ಅಭಿಮಾನಿಗಳು ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ಪರ ಜಯಘೋಷ ಕೂಗಿದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ವಾಂಖೆಡೆ ಕ್ರೀಡಾಂಗಣದ ಕಾರ್ಯಕ್ರಮದಲ್ಲಿ ನಾಯಕ ರೋಹಿತ್‌ ಶರ್ಮಾ ಮಾತನಾಡಿ ಪಾಂಡ್ಯ ಹಾಕಿದ ಕೊನೆಯ ಓವರ್‌ ಫೈನಲ್‌ ಪಂದ್ಯದ ದಿಕ್ಕು ಬದಲಾಯಿಸಲು ನೆರವಾಯಿತು. ಸೂರ್ಯ ಕುಮಾರ್‌ ಹಿಡಿದ ಡೇವಿಡ್‌ ಮಿಲ್ಲರ್‌ ಅವರ ಕ್ಯಾಚ್‌ ಅದ್ಬುತವಾಗಿತ್ತು ಎಂದರು.

ರೋಹಿತ್‌ ಕರೆಯಿಂದ ಕೋಚ್‌ ಆಗಿ ಮುಂದುವರಿದೆ

ಸಮಾರಂಭದಲ್ಲಿ ರಾಹುಲ್‌ ದ್ರಾವಿಡ್‌ ಮಾತನಾಡಿ ಟಿ-20 ವಿಶ್ವಕಪ್‌ ಮುಗಿಯವವರೆಗೆ ಭಾರತ ತಂಡಕ್ಕೆ ಕೋಚ್‌ ಆಗಿ ಮುಂದುವರಿಯಲು ನಾಯಕ ರೋಹಿತ್‌ ಶರ್ಮಾ ದೂರವಾಣಿ ಕರೆ ಮಾಡಿ ಮನವಿ ಮಾಡಿ ನನ್ನ ಮನವೊಲಿಸಿದ್ದರು  ಎಂದು ರಾಹುಲ್‌ ದ್ರಾವಿಡ್‌ ಮೆಲುಕು ಹಾಕಿದರು.

ಕೊಹ್ಲಿ ವೇದಿಕೆಗೆ ಬರಲಿ ಎಂದು ಕೂಗು
ಸಮಾರಂಭ ವೇಳೆ ವಿರಾಟ್‌ ಕೊಹ್ಲಿ ವೇದಿಕೆ ಬರಲಿ ಎಂದು ಅಭಿಮಾನಿಗಳು ಕೂಗಿದರು ಈ ವೇಳೆ ಆಗಮಿಸಿದ ಕೊಹ್ಲಿ ಬಂದು ಮಾತನಾಡಿ ಬೂಮ್ರಾ ಅಂತಹ ಬೌಲರ್‌ ಪೀಳಿಗೆಗೆ (ಜನರೇಷನ್‌) ಒಬ್ಬರು ಸಿಗುವುದು ಎಂದರು. ದಕ್ಷಿಣ ಆಫ್ರಿಕ್ರಾ ವಿರುದ್ಧ ನಡೆದ ಫೈನಲ್‌ ಪಂದ್ಯದ ಕೊನೆಯ ಓವರ್‌ ನಿಜವಾಗಲೂ ಅದ್ಭುತ, ಈತ ಜಗತ್ತಿನ ೮ನೇ ಅದ್ಭುತ ಎಂದು ಹೊಗಳಿದರು.

ಬಿಸಿಸಿಐಯಿಂದ ಬಹುಮಾನ ಹಸ್ತಾಂತರ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್‌ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್‌ನ್ನು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕಾರ್ಯದರ್ಶಿ ಜಯ್‌ ಶಾ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next