Advertisement

ಅಂ.ರಾ.ಪಂದ್ಯಕ್ಕೂ ಮೊದಲು 8 ವಾರಗಳ ತರಬೇತಿ ಮುಖ್ಯ!

01:51 AM May 21, 2020 | Sriram |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿ, ನಿರಂತರ ಪ್ರಯಾಣ, ಬಿಡುವಿಲ್ಲದ ತರಬೇತಿಯಿಂದ ಸದಾ ಬ್ಯುಸಿಯಾಗಿರುತ್ತಿದ್ದ ಭಾರತೀಯ ಕ್ರಿಕೆಟ್‌ ತಂಡ ಮುಂದಿನ ಸರಣಿಗೂ ಸಿದ್ಧತೆ ನಡೆಸುವ ಮೊದಲು 6ರಿಂದ 8 ವಾರಗಳ ಶಿಬಿರಕ್ಕೆ ಸಿದ್ಧವಾಗಬೇಕಿದೆ ಎಂದು ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

“ಯಾವುದೇ ಕೂಟಕ್ಕೆ ತೆರಳುವ ಮೊದಲು ಕನಿಷ್ಟ ಎಂದರೂ 6ರಿಂದ 8 ವಾರಗಳ ತರಬೇತಿ ಶಿಬಿರಕ್ಕೆ ಹಾಗೂ ಕೌಶಲ ಆಧಾರಿತ ಕಾರ್ಯಕ್ರಮಗಳಲ್ಲಿ ಟೀಂ ಇಂಡಿಯಾ ಆಟಗಾರರು ಪಾಲ್ಗೊಳ್ಳುವುದು ಅನಿವಾರ್ಯ ಎಂದು ಆಡಳಿತ ಮಂಡಳಿ ನಿರ್ಧರಿಸಿದೆ’ ಎಂದು ಭರತ್‌ ಅರುಣ್‌ ತಿಳಿಸಿದ್ದಾರೆ. ಸದ್ಯ ಟೀಂ ಇಂಡಿಯಾ ಆಟಗಾರರು ತುಂಬಾ ದಿನಗಳಿಂದ ಮನೆಯಲ್ಲೇ ಇದ್ದಾರೆ. ಇದರಿಂದ ಆಟಗಾರರೆಲ್ಲರೂ ಫಿಟ್‌ನೆಸ್‌ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next