Advertisement

ಜನಪದ ಶೈಲಿ ಹಾಡಿಗೆ ಹೆಜ್ಜೆ ಹಾಕಿದ ಶಿಕ್ಷಕರು

12:51 PM Apr 06, 2019 | Team Udayavani |

ಧಾರವಾಡ: ಸ್ವೀಪ್‌ ಸಮಿತಿ, ಜಿಪಂ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮತದಾರರ ಜಾಗೃತಿ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ|ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ ನಗರದ ಕೃಷಿ ವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶುಕ್ರವಾರ ಜರುಗಿತು.

Advertisement

ಜನಪದ ಶೈಲಿಯ ಹಾಡಿಗೆ ಶಿಕ್ಷಕರು ಕೋಲಾಟದೊಂದಿಗೆ ಹೆಜ್ಜೆ ಹಾಕಿದರೆ, ದೃಷ್ಟಿ ವಿಕಲಚೇತನೆ ಕೃತ್ತಿಕಾ ಜಂಗಲಿಮಠ ಅವರು ಧಾರವಾಡ ಗ್ರಾಮೀಣ ಬಿಇಒ ವಿದ್ಯಾ ನಾಡಿಗೇರ ರಚಿಸಿದ ಚುನಾವಣಾ ಜಾಗೃತಿ ಗೀತೆ ಹಾಡಿದರಲ್ಲದೇ ಬಾನ್ಸುರಿ ವಾದನ ಮೂಲಕ ಸಂತ ಶಿಶುನಾಳ ಶರೀಫರ ತತ್ವಪದಗಳನ್ನು ನುಡಿಸಿದರು.

ಅಳ್ನಾವರದ ಎಇಎಸ್‌ ಪ್ರೌಢಶಾಲೆ ವಿದ್ಯಾರ್ಥಿನಿ ರಮ್ಯಾ ಕುಬಸದ ವೃಕ್ಷಮಾತೆ ಪೋಷಾಕು ಧರಿಸಿ ಗಮನ ಸೆಳೆದಳು. ಹೊನ್ನಾಪುರ ಪ್ರಭುದೇವ ಪ್ರೌಢಶಾಲೆಯ ಮಹಾಂತೇಶ ಹುಬ್ಬಳ್ಳಿ ಅವರು ರಚಿಸಿದ, ಬಾಬಾಜಾನ್‌ ಮುಲ್ಲಾ ಅವರು ರಾಗ
ಸಂಯೋಜಿಸಿದ್ದ ಗೀತೆಗೆ ಶಿಕ್ಷಕಿಯರು ಹೆಜ್ಜೆ ಹಾಕಿದರು. ಮಾದರಿ ಇವಿಎಂ, ವಿವಿಪ್ಯಾಟ್‌ ಯಂತ್ರಗಳಲ್ಲಿ ಅಣಕು ಮತ ಚಲಾಯಿಸಿದರು.

ಮಹದೇವ ಸತ್ತಿಗೇರಿ ನಗೆಹನಿಗಳೊಂದಿಗೆಮತದಾರರನ್ನು ಜಾಗೃತಿ ಗೊಳಿಸಿದರು. ಎಫ್‌ .ಬಿ. ಕಣವಿ, ಕೀರ್ತಿವತಿ ಮತ್ತು ತಂಡದವರು ಕೋಲಾಟ, ಕಿರು ನಾಟಕ ಪ್ರದರ್ಶಿಸಿದರು. ಶಿಕ್ಷಕ ಸಂಜೀವ್‌ ಕಾಳೆ ರಚಿಸಿರುವ ಮತದಾರ ಜಾಗೃತಿ ವ್ಯಂಗ್ಯಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಡಿಡಿಪಿಐ ಗಜಾನನ ಮನ್ನಿಕೇರಿ, ತಾಪಂ ಇಒ ಎಸ್‌.ಎಸ್‌. ಕಾದೊಳ್ಳಿ, ತಹಶೀಲ್ದಾರ್‌ ಪ್ರಕಾಶ ಕುದರಿ, ಎ.ಎ.ಖಾಜಿ, ವಿದ್ಯಾ ನಾಡಿಗೇರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next