Advertisement

ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರತಿಭಟನೆ

03:40 PM Jun 02, 2019 | Team Udayavani |

ಹುಬ್ಬಳ್ಳಿ: ಪದವಿ ವಿದ್ಯಾರ್ಹತೆ ಮತ್ತು ಸೇವಾ ಅನುಭವ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು 6ರಿಂದ 8ನೇ ತರಗತಿಗೆ ಬೋಧಿಸುತ್ತಿರುವ ಪದವೀಧರ ಶಿಕ್ಷಕರ ವೃಂದಕ್ಕೆ ಪರಿಗಣಿಸುವಂತೆ ಒತ್ತಾಯಿಸಿ ಕುಂದಗೋಳ ಬಿಇಒ ಕಚೇರಿ ಮುಂಭಾಗದಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿದರು.

Advertisement

ಪದವಿ ಪೂರೈಸಿರುವ ಹಾಗೂ ಅನುಭವಿ ಶಿಕ್ಷಕರು 2005ರಿಂದ 6-8ನೇ ತರಗತಿಗೆ ಬೋಧಿಸುತ್ತಿದ್ದಾರೆ. ಆದರೆ ಈ ಹಿಂದೆ ಎರಡು ಬಾರಿ 6-8 ನೇ ತರಗತಿಗೆ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಅನುಭವಿ ಹಾಗೂ ಪದವಿ ಶಿಕ್ಷಕರನ್ನು ಈ ವೃಂದಕ್ಕೆ ಸೇರಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮೂರನೇ ಬಾರಿಗೆ ನೇಮಕಾತಿಗೆ ಸರಕಾರ ಮುಂದಾಗಿದ್ದು, ನಮ್ಮನ್ನು ಈ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರೆಂದು ಪರಿಗಣಿಸಲು ಹಿಂದೇಟು ಹಾಕುತ್ತಿದೆ. ಪದವೀಧರ ಶಿಕ್ಷಕರಿಗೆ ವಿಶೇಷ ವೇತನ ಹೆಚ್ಚಳ, ಮುಂಬಡ್ತಿ, ನೇರ ನೇಮಕಾತಿಯಲ್ಲಿ 25:75 ಬದಲಾಗಿ ಸಂಪೂರ್ಣವಾಗಿ ಸೇವಾನಿರತ ಶಿಕ್ಷಕರನ್ನು ಪರಗಣಿಸಬೇಕು. ಮುಂಬಡ್ತಿಗೆ ಇರುವ ಸ್ಪರ್ಧಾತ್ಮಕ ಪರೀಕ್ಷೆ ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next