Advertisement

ಶಿಕ್ಷಕರ ವೇತನ ಪಾವತಿ ಕ್ರಮಕ್ಕೆ ಸಂಘದಿಂದ ಸಚಿವರಿಗೆ ಮನವಿ

03:15 PM Oct 22, 2019 | Team Udayavani |

ಹುಮನಾಬಾದ: ಎರಡು ತಿಂಗಳಿಂದ ವೇತನ ಪಾವತಿಯಾಗದ ಕಾರಣ ತಾಲೂಕಿನ ಶಿಕ್ಷಕರು ತೀವ್ರ ಸಂಕಷ್ಟದಲ್ಲಿದ್ದು, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕೆಂದು ಒತ್ತಾಯಿಸಿ ಸೋಮವಾರ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ತಾಲೂಕಿನ ಸಮಸ್ತ ಶಿಕ್ಷಕರು ಈಗಾಗಲೇ ದಸರಾ ಹಬ್ಬವನ್ನು ಸಂಕಷ್ಟದಲ್ಲೇ ಕಳಿದಿದ್ದಾರೆ. ವಾರದೊಳಗೆ ಬರುವ ದೀಪಾವಳಿಯನ್ನಾದರೂ ಸಂತಸದಿಂದ ಆಚರಿಸಲು ಸರ್ಕಾರ ಶೀಘ್ರ ವೇತನ ಬಿಡುಗಡೆ ಮಾಡಬೇಕು. ಶಿಕ್ಷಕರ ವೇತನ ಬಿಡುಗಡೆಗೆ ಈಗಿರುವ ತ್ತೈಮಾಸಿಕ ಬಜೆಟ್‌ ಬಿಡುಗಡೆ ಪದ್ಧತಿ

ಕೈಬಿಟ್ಟು ವಾರ್ಷಿಕ ವೇತನ ಅನುದಾನ ಬಿಡುಗಡೆ ಪದ್ಧತಿ ಅನುಸರಿಸುವ ಮೂಲಕ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕೆಂದು ಮನವಿಪತ್ರದಲ್ಲಿ ತಿಳಿಸಲಾಗಿದೆ. ಸಮಸ್ಯೆ ಆಲಿಸಿದ ಸಚಿವ ಚವ್ಹಾಣ ಅವರು, ವಿಳಂಬಕ್ಕೆ ಇರುವ ಕಾರಣ ಪರಿಶೀಲಿಸಿ, ದೀಪಾವಳಿ ಹಬ್ಬದೊಳಗೆ ವೇತನ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಕ್‌ ಮೆಹೆಬೂಬ್‌ ಪಟೇಲ, ಪ್ರಧಾನ ಕಾರ್ಯದರ್ಶಿ ಸುರೇಂದ್ರನಾಥ ಹುಡಗೀಕರ್‌ ಮತ್ತಿತರ ಪದಾಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next