Advertisement

Election: ಶಿಕ್ಷಕರ ಕ್ಷೇತ್ರ; ಗ್ಯಾರಂಟಿಗೋ, ಮೈತ್ರಿಗೋ ಮತ?

01:07 PM Feb 14, 2024 | Team Udayavani |

ಬೆಂಗಳೂರು: ಬಿಜೆಪಿ-ಜೆಡಿಎಸ್‌ ಮೈತ್ರಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಅವರ ಜನಪ್ರಿಯತೆ ಫೆ.16ರಂದು ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಆಖಾಡದ ಕೇಂದ್ರ ಬಿಂದು. ಈ ಚುನಾವಣಾ ಫ‌ಲಿತಾಂಶವು ‘ಅಂಕಿ’ಗಿಂತಲೂ ರಾಜ್ಯ ರಾಜಕೀಯದ ಅಂಕಣದ ಮೇಲೆ ಬೀರಬಹುದಾರ ಪ್ರಭಾವಗಳಿಂದಾಗಿ ಹೆಚ್ಚು ಗಮನ ಸೆಳೆಯಲಿದೆ.

Advertisement

ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಆ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರಿ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಪುಟ್ಟಣ್ಣ ಮತ್ತೇ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಮುಂದೆ ಬಂದು ತಮ್ಮನ್ನು ಗೆಲ್ಲಿಸುವಂತೆ ಮತಯಾಚಿಸುತ್ತಿದ್ದಾರೆ. ತಾವು ತೆರವು ಮಾಡಿದ ಕ್ಷೇತ್ರದಿಂದಲೇ ಉಪ ಚುನಾವಣೆಗೆ ಬೇರೊಂದು ಪಕ್ಷದಿಂದ ಸ್ಪರ್ಧಿಸಿ ಮತದಾರರ ಮನವೊಲಿಸುವ ಪ್ರಯತ್ನದಲ್ಲಿ ಪುಟ್ಟಣ್ಣ ನಿರತರಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಅಲ್ಪ ಮತದಿಂದ ಸೋತಿದ್ದ ಎ.ಪಿ. ರಂಗನಾಥ್‌ ಈ ಬಾರಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಮತ ರಂಗ ಪ್ರವೇಶಿಸಿದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವುದರಿಂದ ಈ ಚುನಾವಣಾ ಫ‌ಲಿತಾಂಶ ಉಭಯ ಪಕ್ಷಗಳ ಮುಂದಿನ ರಾಜಕೀಯ ಕಾರ್ಯತಂತ್ರಗಳ ಭಾಗವಾಗಿ ಮಹತ್ವ ಪಡೆದಿದೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ಕಾರ್ಯಕರ್ತರ ಮಟ್ಟದಲ್ಲಿ ಯಾವ ಸ್ವರೂಪದಲ್ಲಿದೆ ಮತ್ತು ಅದು ಹಳೇ ಮೈಸೂರು ಭಾಗದ ಚುನಾವಣಾ ಫ‌ಲಿತಾಂಶದ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬ ದೃಷ್ಟಿಯಿಂದ ಉಭಯ ಪಕ್ಷಗಳು ಈ ಕ್ಷೇತ್ರದ ಫ‌ಲಿತಾಂಶವನ್ನು ಪರಿಗಣಿಸಲಿವೆ. ಅದೇ ರೀತಿ ಅಧಿಕಾರಕ್ಕೆ ಬಂದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರ ಪರಿಣಾಮ ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿಯ ಪ್ರಭಾವದ ಮಾಪಕವಾಗಿ ಕಾಂಗ್ರೆಸ್‌ ಈ ಚುನಾವಣಾ ಫ‌ಲಿತಾಂಶವನ್ನು ಗಮನಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮೂರು ಪಕ್ಷಗಳಿಗೂ ಈ ಚುನಾವಣಾ ಫ‌ಲಿತಾಂಶದಲ್ಲಿ ಪಾಠವೊಂದು ಅಡಕವಾಗಿದೆ.

ಜೆಡಿಎಸ್‌ ಅಭ್ಯರ್ಥಿಯಾಗಿ 2002ರಲ್ಲಿ ಮೊದಲ ಬಾರಿ ಗೆದ್ದಿದ್ದ ಪುಟ್ಟಣ್ಣ ಆ ಬಳಿಕ 2008, 2014ರಲ್ಲಿ ಆ ಪಕ್ಷದಿಂದ ಸ್ಫರ್ಧಿಸಿ ಗೆದ್ದಿದ್ದರು. 2020ರಲ್ಲಿ ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ವಿಜಯ ಮಾಲೆ ಧರಿಸಿ ದ್ದರು. ಸತತ 4 ಬಾರಿ ಅದರಲ್ಲಿಯೂ ಮೈತ್ರಿ ಕೂಟದ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಎರಡರಿಂದಲೂ ಗೆದ್ದು ಪುಟ್ಟಣ್ಣ ಈ ಕ್ಷೇತ್ರವನ್ನು ತಮ್ಮ ಭದ್ರಕೋಟೆಯನ್ನಾಗಿಸಿಕೊಂಡಿದ್ದಾರೆ. ಆದರೆ 2026ರ ನ.11ರ ತನಕ ತಮ್ಮ ವಿಧಾನ ಪರಿಷತ್‌ ಸದಸ್ಯತ್ವ ಇದ್ದರೂ ಸಹ ರಾಜೀನಾಮೆ ನೀಡಿ ಬೇರೊಂದು ಪಕ್ಷದಿಂದ ಸ್ಪರ್ಧಿಸುತ್ತಿರುವ ‘ಅನಿವಾ ರ್ಯತೆ’ಯ ಬಗ್ಗೆ ಮತದಾರರಿಗೆ ಮನದಟ್ಟು ಮಾಡಿಕೊಡುವ ಸವಾಲು ಪುಟ್ಟಣ್ಣರ ಮುಂದಿದೆ.

Advertisement

ಶಿಕ್ಷಕರಿಗೆ 7ನೇ ವೇತನ ಆಯೋಗದ ವರದಿ ಜಾರಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಬೇಕು, ಅನುದಾನ ರಹಿತ ಶಾಲೆಗಳ ಶಿಕ್ಷಕರ ಆರೋಗ್ಯ ವಿಮೆ, ಬಡ್ತಿ ಶಿಕ್ಷಕರಿಗೆ ಕಡಿಮೆ ವೇತನ, ಎಲ್ಲ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ, ಶಿಕ್ಷಕರ ಕಲ್ಯಾಣ ನಿಧಿಯ ಸದ್ಬಳಕೆ, ಖಾಸಗಿ ಶಾಲೆಗಳ ಆರಂಭ ಮತ್ತು ನಿರ್ವಹಣೆಗೆ ಕೆಲ ಕಠಿಣ ನಿಯಮಗಳು ಜಾರಿ ಮುಂತಾದ ವಿಷಯಗಳು, ಸಮಸ್ಯೆಗಳ ಪರಿಹಾರ ಮತ್ತು ಹೋರಾಟದ ಬಗ್ಗೆ ಮತದಾರ ಶಿಕ್ಷಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಚುನಾವಣೆ ನಡೆಯುತ್ತಿದ್ದು 19,200ಕ್ಕಿಂತ ಹೆಚ್ಚು ಮತದಾರರಿದ್ದಾರೆ. ಈ ಪೈಕಿ ಸುಮಾರು 12 ಸಾವಿರ ಮಹಿಳಾ ಮತದಾರರಿದ್ದಾರೆ.

ಪುಟ್ಟಣ್ಣ ಅವರ ಪಕ್ಷಾಂತರದಿಂದ ಶಿಕ್ಷಕರು ಆಕ್ರೋಶ ಗೊಂಡಿ ದ್ದಾರೆ. ಅವರು ವಿಧಾನ ಪರಿಷತ್‌ ಸದಸ್ಯರಾಗಿ ಶಿಕ್ಷಕರಿಗೆ ನೆರವು ನೀಡಿಲ್ಲ, ಅವರ ಧ್ವನಿಯಾಗಿ ಕೆಲಸ ಮಾಡಿಲ್ಲ. ನಾನು ಶಿಕ್ಷಕರ ಪ್ರತಿ ಹೋರಾಟದಲ್ಲಿಯೂ ಅವರ ಜತೆಗಿದ್ದೆ. ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಉತ್ಸಾಹದಿಂದ ಮತ ಯಾಚಿಸುತ್ತಿದ್ದಾರೆ.-ಎ.ಪಿ.ರಂಗನಾಥ್‌, ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ 

ನಾನು ಸದಾ ಶಿಕ್ಷಕರ ಜತೆ ಒಡನಾಟ ಇಟ್ಟುಕೊಂಡಿ ರುವವನು. ಪಕ್ಷಾಂತರ ನನಗೆ ಸಮಸ್ಯೆಯಾಗುವು ದಿಲ್ಲ. ಇದು ಚಿಹ್ನೆ ರಹಿತ ಚುನಾವಣೆ. ನನಗೆ ಈ ಹಿಂದಿನ ಚುನಾವಣೆ ಗಿಂತಲೂ ಉತ್ತಮ ಪರಿಸ್ಥಿತಿಯಿದೆ. ನಾನು ಶಿಕ್ಷಕರಿಗಾಗಿ ನಡೆಸಿದ ಹೋರಾ ಟಗಳು ನನ್ನ ಕೈ ಹಿಡಿಯುತ್ತವೆ. -ಪುಟ್ಟಣ್ಣ, ಕಾಂಗ್ರೆಸ್‌ ಅಭ್ಯರ್ಥಿ

– ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next