Advertisement

ಶಿಕ್ಷಕರ ವರ್ಗಾವಣೆ ತೊಡಕು: ಮಾಹಿತಿ ಪಡೆದ ಸಚಿವ ಮಹೇಶ್‌

06:40 AM Jul 31, 2018 | Team Udayavani |

ಬೆಂಗಳೂರು: ಶಿಕ್ಷಕರ ವರ್ಗಾವಣೆಯಲ್ಲಿ ಉಂಟಾಗಿರುವ ಕಾನೂನಿನ ತೊಡಕು ಹಾಗೂ ಪದವೀಧರ ಶಿಕ್ಷಕರ ನೇಮಕಾತಿ ಗೊಂದಲದ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌ ಸೋಮವಾರ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

Advertisement

ಶಿಕ್ಷಣ ಇಲಾಖೆ ಅಧಿಕಾರಿಗಳ ದಿಢೀರ್‌ ಸಭೆ ನಡೆಸಿದ ಅವರು, 10 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಆಗಿರುವ ಗೊಂದಲದ ಬಗ್ಗೆ ಮಾಹಿತಿ ಪಡೆದು, ಆದಷ್ಟು ಬೇಗ ನೇಮಕಾತಿ ಪೂರ್ಣಗೊಳಿಸುವ ಬಗ್ಗೆಯೂ ಸೂಚನೆ ನೀಡಿದ್ದಾರೆ. ನೇಮಕಾತಿ ವೇಳಾಪಟ್ಟಿಯಂತೆ ಪದವೀಧರ ಶಿಕ್ಷಕರ 1:2 ಅನುಪಾತದ ಕೌನ್ಸೆಲಿಂಗ್‌ ಜುಲೈ 29ರಿಂದ ಆರಂಭವಾಗಬೇಕಿತ್ತು. ಜಿಲ್ಲಾ ಮಟ್ಟದಲ್ಲಿ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭವಾಗಿದೆಯೇ, ಇಲ್ಲವೋ ಎಂಬುದರ ಮಾಹಿತಿ ಆಯುಕ್ತರ ಮೂಲಕ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಕರ ವರ್ಗಾವಣೆ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣಾ ಹಂತ ದಲ್ಲಿದ್ದು, ಯಾವಾಗ ಇತ್ಯರ್ಥವಾಗಬಹುದು, ವರ್ಗಾವಣೆಯನ್ನು ಗೊಂದಲವಿಲ್ಲದೇ ಹೇಗೆ ಮಾಡಬಹುದು ಎಂಬುದರ ಬಗ್ಗೆಯೂ ವಿವರ ಸಂಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next