Advertisement

ವರ್ಗಾವಣಾ ನಿಯಮಗಳು ಅಂತಿಮ, ಆಗಸ್ಟ್ ನಲ್ಲಿ ಶಿಕ್ಷಕರ ವರ್ಗಾವಣೆ: ಸುರೇಶ್ ಕುಮಾರ್

04:45 PM Jul 31, 2020 | keerthan |

ಬೆಂಗಳೂರು: ಶಿಕ್ಷಕರ‌ ವರ್ಗಾವಣಾ ನಿಯಮಗಳನ್ನು ಶಿಕ್ಷಣ‌ ಇಲಾಖೆಯು ಅಂತಿಮಗೊಳಿಸಿದೆ. ಈ ಬಾರಿ ಆಗಸ್ಟ್ ನಲ್ಲಿ ಶಿಕ್ಷಕರ‌ ವರ್ಗಾವಣೆಯು ಅನುಷ್ಠಾನಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದರು.

Advertisement

ಕಳೆದ ಅಧಿವೇಶನದಲ್ಲಿ ಶಿಕ್ಷಕರ‌ ವರ್ಗಾವಣಾ ಕಾಯ್ದೆಗೆ ಅನುಮೋದನೆ ದೊರಕಿತ್ತು.‌ ಶಿಕ್ಷಕ ಸ್ನೇಹಿಯಾದ, ಶಿಕ್ಷಣ ಸ್ನೇಹಿಯಾದ ವರ್ಗಾವಣಾ ನೀತಿಯು ಅನುಷ್ಠಾನಗೊಳ್ಳುವ ಸಮಯ ಸನ್ನಿಹಿತವಾಗಿದೆ. ಇಂದು ಅಧಿಕಾರಿಗಳ‌ ಸಭೆ‌ ನಡೆಸಿ ಕೂಡಲೇ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದರು.

ಕಳೆದ ಬಾರಿ ಕಡ್ಡಾಯ ವರ್ಗಾವಣೆಯಿಂದ ತೊಂದರೆಗೀಡಾಗಿದ್ದ ಶಿಕ್ಷಕರು ಈ‌ ಬಾರಿಯ ಮೊದಲ ಆದ್ಯತೆಯ ವರ್ಗಾವಣೆಯನ್ನು ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next