Advertisement

ಶಿಕ್ಷಕಿಯ ಕೊಲೆ ಕೇಸ್: ಒಡಿಶಾ ಸಿಎಂರದ್ದು ರಾವಣ,ದುರ್ಯೋಧನನ ಸೊಕ್ಕು; ಪ್ರಧಾನ್

12:05 PM Nov 20, 2021 | Team Udayavani |

ಭುವನೇಶ್ವರ್ : ಶಿಕ್ಷಕಿಯೊಬ್ಬರ ಅಪಹರಣ ಮತ್ತು ಕೊಲೆ ಕೇಸ್ ಗೆ ಸಂಬಂಧಿಸಿ ಪ್ರಮುಖ ಆರೋಪಿ ಎನ್ನಲಾದ ಒಡಿಶಾದ ಸಚಿವ ಡಿ.ಎಸ್. ಮಿಶ್ರಾ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಬಿಜೆಪಿ ತೀವ್ರ ಆಕ್ರೋಶ ಹೊರ ಹಾಕಿದ್ದು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ರಾವಣ, ದುರ್ಯೋಧನ ಎಂದು ಕರೆದಿದೆ.

Advertisement

ಹಿರಿಯ ಬಿಜೆಪಿ ನಾಯಕ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ಕಿಡಿ ಕಾರಿ, ಮುಖ್ಯಮಂತ್ರಿಯೂ ಆಗಿರುವ ಬಿಜೆಡಿ ಅಧ್ಯಕ್ಷರು ರಾವಣ, ದುರ್ಯೋಧನನ ಸೊಕ್ಕು ತೋರುತ್ತಿದ್ದಾರೆ ಎಂದಿದ್ದಾರೆ.

ಪಟ್ನಾಯಕ್ ಅವರು ಡಿ.ಎಸ್. ಮಿಶ್ರಾ ಅವರ ವಿಚಾರದಲ್ಲಿ ಡಬಲ್ ಸ್ಟ್ಯಾಂಡ್ ಹೊಂದಿದ್ದು,ಈ ಹಿಂದೆ ಆರೋಪ ಹೊತ್ತಿದ್ದ ಹಲವರನ್ನು ನೈತಿಕ ಆಧಾರದ ಮೇಲೆ ಹ ಉಚ್ಚಾಟಿಸಿದ್ದರು. ಆದರೆ, ಕಾಳಹಂಡಿ ಶಿಕ್ಷಕೀಯ ಪ್ರಕರಣದಲ್ಲಿ ಗೃಹ ಖಾತೆಯ ರಾಜ್ಯ ಸಚಿವರಾಗಿರುವ ಪ್ರಧಾನ ಆರೋಪಿಯನ್ನು ಪೋಷಿಸುತ್ತಿದ್ದಾರೆ.ಸರ್ಕಾರವು ಈಗ ಮೌನವನ್ನು ವಹಿಸುತ್ತಿದೆ ಎಂದು ಪ್ರಧಾನ್ ಆರೋಪಿಸಿದ್ದಾರೆ.

ಬಿಜೆಡಿ, ಪ್ರಧಾನ್ ಆರೋಪಕ್ಕೆ ತಿರುಗೇಟು ನೀಡಿದ್ದು, ಉತ್ತರ ಪ್ರದೇಶದಲ್ಲಿ ರೈತರ ಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಜೈಲು ಸೇರಿದ್ದು, ಬಿಜೆಪಿಯಿಂದ ನಾವು ನೈತಿಕತೆಯ ಪಾಠ ಕಲಿಯ ಬೇಕಾಗಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next