Advertisement

ಕಲಬುರಗಿ: ನೀರು ತರಲು ಹೋಗಿ ಬಾವಿಗೆ ಬಿದ್ದು ಶಿಕ್ಷಕ ಸಾವು

08:01 PM Jan 29, 2022 | Team Udayavani |

ಅಫಜಲಪುರ (ಕಲಬುರಗಿ): ತಾಲೂಕಿನ ತೆಲ್ಲೂರ ಗ್ರಾಮದಲ್ಲಿ ನೀರು ತರಲು ಹೋಗಿದ್ದ ಖಾಸಗಿ ಶಾಲೆ ಶಿಕ್ಷಕ ಮಲ್ಲಣ್ಣ ಮಡಿವಾಳ(34) ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ಜರುಗಿದೆ.

Advertisement

ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಗೆ ನೀರು ತರಲೆಂದು ಬಾವಿಗೆ ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಈಜು ಬಾರದ ಮಲ್ಲಣ್ಣ ರಕ್ಷಣೆಗಾಗಿ ಕೂಗಾಡಿದ್ದಾರೆ, ಆದರೆ ಬಾವಿಯ ಬಳಿ ಜನರಲಿಲ್ಲದ ಕಾರಣ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಈ ಕುರಿತು ಮೃತ ಮಲ್ಲಣ್ಣ ಅವರ ತಾಯಿ ಸಂಗಮ್ಮ ಮಡಿವಾಳ ದೇವಲ ಗಾಣಗಾಪೂರ ಠಾಣೆಯಲ್ಲಿ ದೂರು  ದಾಖಲಿಸಿದ್ದಾರೆ. ಸ್ಥಳಕ್ಕೆ ಪಿಎಸ್‍ಐ ರಾಜಶೇಖರ ರಾಠೋಡ, ಎಎಸ್‍ಐ ಶಾಮರಾವ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next