Advertisement

ಪುತ್ತೂರು:ಪಾಠ ಬಿಟ್ಟು ವಿದ್ಯಾರ್ಥಿನಿಗೆ ಮೆಸೇಜ್‌; ಶಿಕ್ಷಕನಿಗೆ ಗೂಸಾ 

04:42 PM Aug 30, 2018 | |

ಪುತ್ತೂರು: ತಾಲೂಕಿನ ನೆಟ್ಟಣಿಗೆ ಸರ್ಕಾರಿ ಮುಟ್ನೂರು ಪ್ರೌಢ ಶಾಲೆಯ ಶಿಕ್ಷಕನೊಬ್ಬನಿಗೆ ಸಾರ್ವಜಿನಿಕರು ಥಳಿಸಿ ದಿಗ್‌ಬಂಧನ ಹಾಕಿದ ಘಟನೆ ಗುರುವಾರ ನಡೆದಿದೆ. 

Advertisement

ವರದಿಯಾದಂತೆ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ನಿರಂತರವಾಗಿ ಅಶ್ಲೀಲ ಮೆಸೇಜ್‌ ಮಾಡಿದ ಆರೋಪದಲ್ಲಿ ಮಂಜುನಾಥ್‌ ಎಂಬ ಶಿಕ್ಷಕನಿಗೆ ಥಳಿಸಲಾಗಿದೆ. 

ಈಶ್ವರಮಂಗಲ ಹೊರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆರೋಪಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next