Advertisement

TDP ಪಕ್ಷದ ನಾಯಕರ ಸೈಕಲ್‌ ತುಕ್ಕು ಹಿಡಿದಿದೆ: ಜಗನ್‌ ರೆಡ್ಡಿ ಲೇವಡಿ

12:47 AM Mar 11, 2024 | Team Udayavani |

ಹೈದರಾಬಾದ್‌: ಆಂಧ್ರ ಪ್ರದೇಶದಲ್ಲಿ ಲೋಕಸಭೆ ಜತೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ನಾಯಕರ ವಾಕ್ಸಮರ ಜೋರಾಗಿದೆ. ಎನ್‌ಡಿಎ ಕೂಟಕ್ಕೆ ಮರಳಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಅವರನ್ನು ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಹಾಗೂ ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ ಲೇವಡಿ ಮಾಡಿದ್ದಾರೆ.

Advertisement

“ಟಿಡಿಪಿ ನಾಯಕರ “ಸೈಕಲ್‌’ ತುಕ್ಕು ಹಿಡಿದಿದೆ. ಹಾಗಾಗಿ ಬೇರೆ ಪಾರ್ಟಿಯ ನೆರವು ಪಡೆ ಯುತ್ತಿದ್ದಾರೆ’ ಎಂದು ಜಗನ್‌ ಹೇಳಿದ್ದಾರೆ. ಸೈಕಲ್‌ ಟಿಡಿಪಿ ಚಿಹ್ನೆಯಾಗಿದೆ. 2018ರಲ್ಲಿ ಎನ್‌ಡಿಎ ತೊರೆದಿದ್ದ ಟಿಡಿಪಿ ಮತ್ತೆ ಎನ್‌ಡಿಎಗೆ ಮರಳಿದ್ದು, ಆಂಧ್ರದಲ್ಲಿ ಜಂಟಿಯಾಗಿ ಚುನಾ ವಣೆಯನ್ನು ಎದುರಿಸಲು ಸಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next