Advertisement

Andhra Pradesh ಸಿಎಂ ಜಗನ್ ಗೆ ನೋಟಿಸ್ ಜಾರಿ ಮಾಡಿದ ಚುನಾವಣ ಆಯೋಗ

04:38 PM Apr 07, 2024 | Team Udayavani |

ಅಮರಾವತಿ: ತೆಲುಗು ದೇಶಂ ಪಕ್ಷದ (TDP) ಅಧ್ಯಕ್ಷ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಭಾರತ ಚುನಾವಣ ಆಯೋಗ ನೋಟಿಸ್ ಜಾರಿ ಮಾಡಿದೆ.

Advertisement

ಟಿಡಿಪಿ ಪಾಲಿಟ್‌ಬ್ಯೂರೋ ಸದಸ್ಯ ವರ್ಲಾ ರಾಮಯ್ಯ ಅವರು ಏಪ್ರಿಲ್ 5 ರಂದು ಸಿಎಂ ಜಗನ್ ರೆಡ್ಡಿ ವಿರುದ್ಧ ಅಧಿಕೃತ ದೂರು ದಾಖಲಿಸಿ ಇಸಿಗೆ ಪತ್ರ ಬರೆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

48 ಗಂಟೆಗಳ ಒಳಗೆ ತನ್ನ ನಿಲುವನ್ನು ಸಲ್ಲಿಸುವಂತೆ ಜಗನ್‌ಗೆ ಇಸಿ ನೋಟಿಸ್ ನೀಡಿದ್ದು, ವಿಫಲವಾದರೆ ಜಗನ್ ರೆಡ್ಡಿ ವಿರುದ್ಧ ಮುಂದಿನ ಕ್ರಮಕ್ಕಾಗಿ ಇಸಿಗೆ ವರದಿಯನ್ನು ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಿಎಂ ಜಗನ್ ಅವರ ವಿರುದ್ಧ ರಾಕ್ಷಸ ಮತ್ತು ಇತರ ಆಕ್ಷೇಪಾರ್ಹ ಪದಗಳನ್ನು ಬಳಸಿದ ಚಂದ್ರಬಾಬು ನಾಯ್ಡು ಅವರಿಗೂ ಈ ಹಿಂದೆ ಚುನಾವಣ ಆಯೋಗ ನೋಟಿಸ್ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next