Advertisement

ಪಿಎಂ ನಿವಾಸ ಬಳಿ ಪ್ರತಿಭಟನೆಗೆ ಟಿಡಿಪಿ ಯತ್ನ

10:10 AM Apr 09, 2018 | Karthik A |

ಹೊಸದಿಲ್ಲಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಟಿಡಿಪಿ ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಮಾಜಿ ಸಚಿವ ವೈ.ಎಸ್‌.ಚೌಧರಿ ನಿವಾಸದಲ್ಲಿ ಪ್ರಧಾನಿ ನಿವಾಸದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಸುಮಾರು 20ಕ್ಕೂ ಅಧಿಕ ಟಿಡಿಪಿ ಸಂಸದರು, ನಾಯಕರು ಪ್ರಧಾನಿ ನಿವಾಸಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆಯೇ ತಡೆದು, ತುಘಲಕ್‌ ಠಾಣೆಗೆ ಕರೆ ತರಲಾಯಿತು. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಠಾಣೆಗೆ ತೆರಳಿ ಸಂಸದರನ್ನು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next