Advertisement

TDP ನಾಯಕತ್ವ ಯಾರ ಕೈಗೆ?

11:49 PM Sep 12, 2023 | Team Udayavani |

ಆಂಧ್ರಪ್ರದೇಶ ಚುನಾವಣೆ ಸಮೀಪಿಸುತ್ತಿರುವಂತೆಯೇ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನದ ಮೂಲಕ ಅಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ಕೌಶಲಾಭಿವೃದ್ಧಿ ಹಗರಣ ಸಂಬಂಧ ನಾಯ್ಡು ಜೈಲು ಸೇರಿದರೆ, ಅವರ ಪುತ್ರ, ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್‌ ಕೂಡ ಇದೇ ಪ್ರಕರಣದಲ್ಲಿ ತನಿಖೆ ಎದುರಿಸುವ ಎಲ್ಲ ಸಾಧ್ಯತೆಯೂ ಇದೆ ಎನ್ನುತ್ತಿವೆ ವರದಿಗಳು. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಅಪ್ಪ-ಮಗನ ಅನುಪಸ್ಥಿತಿಯಲ್ಲಿ ಟಿಡಿಪಿ ನಾಯಕತ್ವವನ್ನು ಯಾರು ವಹಿಸಿಕೊಳ್ಳಬೇಕು ಎಂಬ ಚರ್ಚೆ ನಿಧಾನಕ್ಕೆ ಶುರುವಾಗಿದೆಯಂತೆ.

Advertisement

ಟಿಡಿಪಿ ಆಂಧ್ರ ಘಟಕದ ಅಧ್ಯಕ್ಷ ಅಚ್ಚೆನ್‌ ನಾಯ್ಡು ಮತ್ತು ಮಾಜಿ ಶಿಕ್ಷಣ ಸಚಿವ ಗಂಟ ಶ್ರೀನಿವಾಸ ರಾವ್‌ ನಡುವೆ “ನಾಯಕತ್ವ’ಕ್ಕೆ ಪೈಪೋಟಿ ಆರಂಭವಾಗುವ ಎಲ್ಲ ಸಾಧ್ಯತೆಗಳೂ ಇವೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನಾಯ್ಡು ಇಲ್ಲದೆಯೇ ಪಕ್ಷ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳುತ್ತದೋ ಅಥವಾ ನಾಯಕತ್ವಕ್ಕಾಗಿ ಕಚ್ಚಾಟ ಶುರುವಾಗುತ್ತದೋ ಎಂಬ ಚಿಂತೆ ಕಾರ್ಯಕರ್ತರನ್ನು ಕಾಡುತ್ತಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next