Advertisement

ತೆರಿಗೆ ವಂಚನೆ ಪತ್ತೆಗೆ ವಿಚಕ್ಷಣೆ ಅಗತ್ಯವಿಲ್ಲ

01:38 AM Jul 15, 2019 | Team Udayavani |

ಹೊಸದಿಲ್ಲಿ: ತೆರಿಗೆ ವಂಚನೆಯನ್ನು ಪತ್ತೆ ಮಾಡಲು ಜನರ ಸೋಷಿಯಲ್‌ ಮೀಡಿಯಾ ಖಾತೆಗಳ ಮೇಲೆಯೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ ಎಂಬುದು ತಪ್ಪು ಕಲ್ಪನೆ ಎಂದು ನೇರ ತೆರಿಗೆ ಮಂಡಳಿ ಅಧ್ಯಕ್ಷ ಪಿ.ಸಿ ಮೋದಿ ಹೇಳಿದ್ದಾರೆ. ಆದಾಯ ತೆರಿಗೆ ವಂಚನೆಯನ್ನು ಪತ್ತೆ ಮಾಡಲು ಹಲವು ಮಾರ್ಗಗಳಿವೆ. ವಿವಿಧ ಇಲಾಖೆಗಳ ದತ್ತಾಂಶವನ್ನು ಸಂಗ್ರಹಿಸಿ ಈ ಬಗ್ಗೆ ಮಾಹಿತಿ ಪಡೆಯಬಹುದು. ಇದಕ್ಕಾಗಿ ಡೇಟಾ ವಿಶ್ಲೇಷಣೆ ವ್ಯವಸ್ಥೆಯನ್ನು ಆದಾಯ ತೆರಿಗೆ ಇಲಾಖೆ ಸ್ಥಾಪಿಸಿದೆ ಎಂದು ಅವರು ಹೇಳಿದ್ದಾರೆ.

Advertisement

ಐಷಾರಾಮಿ ವಿದೇಶ ಪ್ರಯಾಣ ಅಥವಾ ಐಷಾರಾಮಿ ವಾಹನ ಖರೀದಿ ಹಾಗೂ ಇತರ ಐಷಾರಾಮಿ ಸಾಮಗ್ರಿಗಳ ಖರೀದಿ ಮಾಡಿದ ಬಗ್ಗೆ ಜನರು ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಕಟಿಸುತ್ತಾರೆ. ಇದರ ಮೇಲೆ ಕಣ್ಣಿಡುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂಥ ಖರೀದಿಗೆ ಸೂಕ್ತವಾಗಿ ಆದಾಯ ಹಾಗೂ ಇತರ ತೆರಿಗೆ ಪಾವತಿ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next