Advertisement

Tax collection: ಜಿಲ್ಲೆಯ 101 ಗ್ರಾಪಂಗಳಲ್ಲಿ ಯಲ್ಲೋ ತೆರಿಗೆ ವಸೂಲಿ

03:16 PM Dec 21, 2023 | Team Udayavani |

ದೇವನಹಳ್ಳಿ: ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ತೆರಿಗೆ ವಸೂಲಾತಿಯಾದರೆ ಮಾತ್ರ ಅಭಿವೃದ್ಧಿ ಕಾರ್ಯಗಳು ಮಾಡಲು ಸಹಕಾರಿಯಾಗುತ್ತದೆ. ಜಿಲ್ಲೆಯ ಗ್ರಾಪಂಗಳ ನಿರೀಕ್ಷಿತ ಮಟ್ಟದಲ್ಲಿ ವಸೂಲಿ ಮಾಡಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮುಖ್ಯ ಕಾರ್ಯದರ್ಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಜಿಪಂ ಡಿಸೆಂಬರ್‌ ತಿಂಗಳ ಪೂರ್ತಿ ತೆರಿಗೆ ವಸೂಲಿ ಆಂದೋಲನಕ್ಕೆ ಚಾಲನೆ ನೀಡಿದೆ.

Advertisement

ಬೆಂ. ಗ್ರಾಮಾಂತರ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಬೇಡಿಕೆ ಮತ್ತು ಪ್ರಸ್ತುತ ಬೇಡಿಕೆಯಲ್ಲಿರುವ ಶೇ. 100 ತೆರಿಗೆ ವಸೂಲಾತಿ ಮಾಡುವಂತೆ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಬೆಂ. ಗ್ರಾಮಂತರ ಜಿಲ್ಲೆಯಲ್ಲಿ ಶೇ. 50ರಷ್ಟು ತೆರಿಗೆ ವಸೂಲಾತಿಯಾಗಿದೆ. ಈ ತಿಂಗಳಿನ ಒಳಗಾಗಿ ಶೇ. 75 ತೆರಿಗೆ ವಸೂಲಾತಿ ಮಾಡುವ ಗುರಿಯನ್ನು ಸಾಧಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗಿದೆ.

ತೆರಿಗೆ ವಸೂತಿಯಲ್ಲಿ ನಿರ್ಲಕ್ಷ ಮಾಡುವ ಕರ ವಸೂಲಿಗರ ಮೇಲೆ ಶಿಸ್ತುಕ್ರಮಕ್ಕೆ ವರದಿ ಸಲ್ಲಿಸುವಂತೆ ಜಿಪಂ ಸೂಚನೆ ನೀಡಿದೆ. ತೆರಿಗೆ ವಸೂಲಿ ಮಾಡದೇ ಇರುವ ಹಾಗೂ ಅತಿ ಕಡಿಮೆ ಪ್ರಗತಿ ಸಾಧಿಸುವ ಕರ ವಸೂಲಿಗಾರರ ಪಟ್ಟಿಯನ್ನು ಸಲ್ಲಿಸುವಂತೆ ತಾಪಂ ಇವುಗಳಿಗೆ ತಿಳಸಲಾಗಿದೆ. ತಮಗೆ ನೀಡಿರುವ ಟಾರ್ಗೆಟ್‌ ಪೂರ್ಣ ಮಾಡಬೇಕು. ಆ ಗುರಿಯನ್ನು ತಲುಪುವಂತೆ ಆಗಬೇಕು. ಇಲ್ಲದಿದ್ದರೆ ಗ್ರಾಪಂ ಕರವಸೂಲಿಗರ ಯಾವುದೇ ಹರಕೆ ಉತ್ತರಗಳನ್ನು ನೀಡಬಾರದು ಎಂದು ಅಧಿಕಾರಿಗಳು ಮಾಹಿತಿಯಲ್ಲಿ ತಿಳಿಸಿದ್ದಾರೆ.

101 ಗ್ರಾಪಂಗಳಲ್ಲಿ ವಸೂಲಾತಿ : ಬೆಂ. ಗ್ರಾಮಾಂತರ ಜಿಲ್ಲೆಯ 101 ಗ್ರಾಪಂಗಳಲ್ಲೂ ಡಿಸೆಂಬರ್‌ ತಿಂಗಳು ಪೂರ್ತಿ ತೆರಿಗೆ ವಸೂಲಿ ಜಿಪಂ ಮುಂದಾಗಿದೆ. ಇದರ ಸಂಬಂಧಪಟ್ಟಂತೆ ಎಲ್ಲಾ ಗ್ರಾಪಂಗಳಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದೆ. ಜನರು ಗ್ರಾಪಂಗಳಿಗೆ ಬಂದು ತೆರಿಗೆ ಪಾವತಿಸುವುದು ತೀರ ಕಡಿಮೆ. ಸಿಬ್ಬಂದಿಗಳು ಮನೆ ಬೆಳೆಯುವುದು ಇವತ್ತು ನಾಳೆ ಎಂದು ಹೋಗಿಬರು ವುದು ಸರ್ವೇ ಸಾಮಾನ್ಯವಾಗಿದೆ. ತೆರಿಗೆ ಮಹತ್ವವನ್ನು ಗ್ರಾಮೀಣ ಜನರಿಗೆ ಸಾರುವ ನಿಟ್ಟಿನಲ್ಲಿ ಅಗತ್ಯ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಂದೋಲನದ ಮಾದರಿಯಲ್ಲಿ ಹಮ್ಮಿಕೊಂಡು ಗ್ರಾಪಂಗಳಲ್ಲಿ ವಾರ್ಷಿಕ ಬೇಡಿಕೆ ತೆರಿಗೆಯನ್ನು ವಸೂಲಿ ಮಾಡುವ ಗುರಿಯನ್ನು ಆಂದೋಲನದಲ್ಲಿ ಹೊಂದಲಾಗಿದೆ. ಡಿಸೆಂಬರ್‌ 31ರವರೆಗೆ 101 ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿ ಆಂದೋಲನ ನಡೆಯುತ್ತಿದೆ.

ಬೆಂ. ಗ್ರಾಮಾಂತರ ಜಿಲ್ಲೆಯು ಸಾಕಷ್ಟು ಗ್ರಾಪಂ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆ ಕಟ್ಟಡಗಳು, ಕಾರ್ಖಾನೆಗಳು, ವೇರ್‌ಹೌಸ್‌ ನಂಥ ಆರ್ಥಿಕ ಸಂಪನ್ಮೂಲಗಳನ್ನು ಗ್ರಾಪಂ ಬರುವ ಭರಪೂರ ಅವಕಾಶ ಗಳಿದ್ದರೂ ಸಾಕಷ್ಟು ಗ್ರಾಪಂಗಳಲ್ಲಿ ಕಡಿಮೆ ತೆರಿಗೆ ವಸೂಲಿ ಆಗಿರುವುದು ಕಂಡು ಬಂದಿದೆ. ಸರ್ಕಾರದ ಅನುದಾನಗಳಿಗಿಂತಲೂ ಸ್ಥಳೀಯ ತೆರಿಗೆಯಿಂದ ಬರುವ ವರಮಾನದಲ್ಲಿ ಮುಖ್ಯವಾಗಿ ಗ್ರಾಪಂಗಳಲ್ಲಿ ಕುಡಿವ ನೀರು ಚರಂಡಿ ಸ್ವತ್ಛತೆ, ಸಿಬ್ಬಂದಿವೇತನ ಮೊದಲಾದ ಅಗತ್ಯವಾಗಿರುವುದರಿಂದ ಕೆಲ ಗ್ರಾಪಂಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Advertisement

ದೇವನಹಳ್ಳಿ ತಾಲೂಕಿನ 24 ಗ್ರಾಪಗಳಲ್ಲಿ ತೆರಿಗೆ ವಸೂಲಾತಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಯಾವುದೇ ಒಂದು ಗ್ರಾಮ ಅಭಿವೃದ್ಧಿ ಹೊಂದಬೇಕಾದರೆ ತೆರಿಗೆ ಸಂಗ್ರಹದಿಂದ ಮಾತ್ರ ಸಾಧ್ಯ. ಗ್ರಾಪಂಗಳು ಆರ್ಥಿಕವಾಗಿ ಸದೃಢವಾಗಬೇಕಿರುವುದು ತೆರಿಗೆಯಿಂದ ಮಾತ್ರ. ಈಗಾಗಲೇ ತಾಲೂಕಿನ ಎಲ್ಲ ಗ್ರಾಪಂ ಪಿಡಿಒ ಗಳಿಗೆ  ತೆರಿಗೆ ವಸೂಲಿ ಮಾಡುವಂತೆ ಸೂಚಿಸಲಾಗಿದೆ.-ಶ್ರೀನಾಥ್‌ ಗೌಡ, ತಾಪಂ ಇಒ ದೇವನಹಳ್ಳಿ

ಗ್ರಾಪಂಗಳಲ್ಲಿ ತೆರಿಗೆ ಸಂಗ್ರಹವಾದರೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು. ಜಿಲ್ಲಾದ್ಯಂತ ಎಲ್ಲಾ ಗ್ರಾಪಂಗಳಲ್ಲಿ 2023-24ನೇ ಸಾಲಿಗೆ ತೆರಿಗೆ ವಸೂಲಿ ಗುಡಿಯನ್ನು ಮುಟ್ಟುವ ದೃಷ್ಟಿಯಿಂದ ಆಂದೋಲನವನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ.-ಪಿ.ಕೆ ರಮೇಶ್‌ ,ಜಿಪಂ ಉಪ ಕಾರ್ಯದರ್ಶಿ

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next