Advertisement
ನೀವು ಹೋಟೆಲ್ ಮುಂದೆ ನಿಂತಾಗ ಕಾಡುವ ಅನುಮಾನ ಒಂದೇ.
Related Articles
Advertisement
ಹೋಟೆಲ್ ಅನ್ನು ಶುರು ಮಾಡಿದ್ದು ಕುಂದಾಪುರದ ಮೂಲದ ಐ.ಎನ್. ಕೆ. ಕೃಷ್ಣ ಮಧ್ಯಸ್ಥ. ದೇಶಕ್ಕೆ ಸ್ವಾತಂತ್ರÂ ಸಿಗುವ 6 ತಿಂಗಳ ಮೊದಲು ಈ ಹೋಟೆಲ್ ಶುರುಮಾಡಿದರು. ಹೆಚ್ಚುಕಮ್ಮಿ 70 ವರ್ಷದಿಂದ ಹೋಟೆಲ್ ನಡೆಸುತ್ತಿದ್ದು, ಈಗ ಹೋಟೆಲ್ನ ಜವಾಬ್ದಾರಿಯನ್ನು ಮಗ ಹರೀಶ್ ವಹಿಸಿಕೊಂಡಿದ್ದಾರೆ.
“ನಮ್ಮ ತಂದೆ ಹೋಟೆಲ್ ಆರಂಭ ಮಾಡಿದಾಗ ಶುಚಿ, ರುಚಿ, ಬೆಲೆ ಈ ಮೂರಕ್ಕೂ ಮಹತ್ವ ಕೊಟ್ಟಿದ್ದರು. ನಾನು ಕೂಡ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದೇನೆ. ಹಾಗಾಗಿ, ಜನ ಹುಡುಕಿಕೊಂಡು ನಮ್ಮ ಹೋಟೆಲ್ಗೆ ಬರುತ್ತಿದ್ದಾರೆ ಎನ್ನುತ್ತಾರೆ ಹರೀಶ್.
ಟೊಮೆಟೋ ಬಾತ್ ಇದೆಯÇÉ; ಬಹುಶಃ ಇಷ್ಟೊಂದು ರುಚಿ, ರುಚಿಯಾದ ರೈಸ್ಬಾತ್ ಬೇರೆ ಸಿಗೋದು ಕಷ್ಟ. ಅದರ ಜೊತೆಗೆ ಕೊಡುವ ಹುರಿಗಡಲೆ, ಕೊಬ್ಬರಿ, ಕಡಲೇಬೀಜ ಮಿಶ್ರಿತ ಚಟ್ನಿ ಸೂಪರ್. ಇದಲ್ಲದೇ ಪೂರಿ-ಸಾಗು, ವಾವ್. ಪೂರಿ ಜೊತೆ ಸಿಗುವ ತರಕಾರಿ ಸಾಗುವಿನ ಖದರೇ ಬೇರೆ. ಉದ್ದಿನವಡೆ, ಬೋಂಡಾ ಮಾಮೂಲಿ. ಮುಖ್ಯವಾಗಿ ಹೇಳಬೇಕಾದುದು ಇಲ್ಲಿನ ಬಿಸಿ ಬಿಸಿ ತುಪ್ಪದ ದೋಸೆ ಬಹಳ ಫೇಮಸ್ಸು. ಎಕ್ಸ$r$Åಮೈಲೇಜ್ ಅಂತ ಕೇಳಿದರಂತೂ ತುಪ್ಪದ ಮಸಾಲೆ ದೋಸೆ ಸಿಗುತ್ತದೆ. ತುಪ್ಪದ ದೋಸೆಗೆ ಚಟ್ನಿ ಯೊಂದಿಗೆ ಬಟಾಣಿ/ತರಕಾರಿ ಸಾಗು ರುಚಿಯನ್ನು ಹೆಚ್ಚಿಸುತ್ತದೆ. ಇಲ್ಲಿ ದೋಸೆ ವಿಶೇಷ ಎಂದರೆ ರೋಸ್ಟ್ ಆಗಿರುವುದು.
ಇವಿಷ್ಟೇ ಅಲ್ಲ, ಇಲ್ಲಿ ಮಸಾಲೆ ವಡೆ, ಬೋಂಡಾ, ಬಜ್ಜಿ ಕೂಡ ಇಲ್ಲಿ ರುಚಿಕಟ್ಟೆ. ಮಧ್ಯಾಹ್ನ 12.30ಕ್ಕೆ ಎಲ್ಲ ತಿಂಡಿಗಳು ಬಂದ್. ಬರೀ ಅನ್ನ ರಸಂ. ಹಬೆಯಾಡುವ ತಿಳಿಸಾರು, ಅನ್ನ, ಪಲ್ಯ, ಹಪ್ಪಳ ಮೃಷ್ಟಾನ್ನ ಭೋಜನವೇ. ಏಕೆಂದರೆ ಇದರ ರುಚಿ ಹಾಗಿರುತ್ತದೆ. ಇದರ ಜೊತೆಗೆ ಮೊಸರನ್ನ, ಚಿತ್ರಾನ್ನ, ಬೆಣ್ಣೆ ಮುರುಕು ಸಿಗುತ್ತದೆ. ಮಿಕ್ಚರ್ ಕೇಳಿ ಕೊಳ್ಳವುದನ್ನು ಮರೆಯಬೇಡಿ. ಸಂಜೆಯ ವೇಳೆ ಬಿಸಿಬಿಸಿ ಇಡ್ಲಿ, ರವೆ ಇಡ್ಲಿ, ಸ್ಪೆಷಲ್ ದೋಸೆ ಅಂದರೆ ತುಪ್ಪದ ದೋಸೆ. ಬಿಸಿ ಬಿಸಿ ಬಜ್ಜಿ ತಿನ್ನಲೆಂದೇ ಪರ್ಮನೆಂಟ್ ಗ್ರಾಹಕರು ಬರುತ್ತಾರೆ. ಟೊಮೆಟೊ, ತುಂಡು ಕೊಬ್ಬರಿಯ ರವೆ ಇಡ್ಲಿà ಬಿಸಿಬಿಸಿಯಾಗೇ ಸಿಗುತ್ತದೆ. ಇದಕ್ಕೆ ಸೂಪರ್ ಕಾಂಬಿನೇಷನ್ ಬಟಾಣಿ ಸಾಗು. ಅದಕ್ಕೆ ಕಡಲೇ ಚಟ್ನಿ ಸೇರಿಸಿ ತಿಂದು ನೋಡಿ. ರಾಜಕಾರಣಿಗಳು, ಕಿರುತೆರೆ ಕಲಾವಿದರಿಗೆ ಇದು ಫೇವರೆಟ್ ಅಡ್ಡ. ಬೆಂಗಳೂರಿಗೆ ಬಂದು, ಲಾಲ್ಬಾಗ್ ರೌಂಡ್ಗೆ ಬಂದಾಗ ನಂದೀಶ್ವರನ ಲಂಚ್ ಹೋಂಗೆ ಭೇಟಿ ನೀಡಲು ಮರೆಯಬೇಡಿ. ನೆನಪಿರಲಿ, ಈ ಹೋಟೆಲ್ ಬೆಳಗ್ಗೆ 7ಕ್ಕೆ ಶುರು. ರಾತ್ರಿ 8ಕ್ಕೆ ಕ್ಲೋಸ್. ಭಾನುವಾರ ರಜೆ. – ಕಟ್ಟೆ