Advertisement

Brijesh Chowta: ಕರಾವಳಿಯ ಐಟಿ ಕ್ಷೇತ್ರ ಸುಧಾರಣೆಗೆ ಕಾರ್ಯಪಡೆ

11:46 PM Oct 01, 2024 | Team Udayavani |

ಮಂಗಳೂರು: ಮಂಗಳೂರು ಸೇರಿದಂತೆ ಕರಾವಳಿಯ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದ ಸಮಗ್ರ ಸುಧಾರಣೆಗಾಗಿ ಈ ಪ್ರದೇಶದ ಐಟಿ ಉದ್ದಿಮೆಯ ಪ್ರಮುಖರಿರುವ ಐಟಿ ಕಾರ್ಯಪಡೆಯೊಂದನ್ನು ರಚಿಸುವುದು, ಈ ಭಾಗದ ಆವಶ್ಯಕತೆಗಳ ಬಗ್ಗೆ ನಿರಂತರ ಸಮಾಲೋಚನೆ ನಡೆಸಿ, ಮುಂದಿನ ಹೆಜ್ಜೆಗಳನ್ನಿರಿಸುವುದು ಅತ್ಯವಶ್ಯಕ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅಭಿಪ್ರಾಯಪಟ್ಟರು.

Advertisement

ನಗರದ ಐಟಿ ಉದ್ದಿಮೆಗಳು, ಐಟಿ ವೃತ್ತಿಪರರೊಂದಿಗೆ ಮಂಗಳವಾರ ಆಯೋಜಿಸ ಲಾಗಿದ್ದ “ಮಂಗಳೂರ್ ಐಟಿ ವೇವ್‌-ಸರ್ಚಿಂಗ್‌ ಟುವರ್ಡ್ಸ್‌ ಸಿಲಿಕಾನ್‌ ಬೀಚ್‌ ಆಫ್‌ ಇಂಡಿಯಾ’ ಎಂಬ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.

ಐಟಿ ಹಬ್‌ಗ ಪ್ರಸ್ತಾವನೆ: ಮಂಗಳೂರಿನಲ್ಲಿ 50 ಎಕರೆಯಷ್ಟು ಜಾಗ ಸಿಕ್ಕಿದರೆ ಐಟಿ ಹಬ್‌ ಸ್ಥಾಪಿಸಿ ಆ ಮೂಲಕ ಐಟಿ ಕ್ಷೇತ್ರಕ್ಕೆ ಉತ್ತೇಜನ ಕೊಡಬಹುದು ಎಂಬ ಅಭಿಪ್ರಾಯ ಕೇಳಿಬಂದಿದ್ದು, ಅದಕ್ಕೆ ಉತ್ತರಿಸಿದ ಕ್ಯಾ| ಚೌಟ, ಈ ಕುರಿತು ಕಾರ್ಯಪಡೆ ಮೂಲಕ ಚರ್ಚಿಸಿ ಪ್ರಸ್ತಾವನೆ ಸಿದ್ಧಪಡಿಸೋಣ ಎಂದರು.

ನೊವಿಗೂ ಸೊಲ್ಯೂಷನ್ಸ್‌ನ ಪ್ರವೀಣ್‌ ಕಲಾºವಿ ಸಂವಾದ ನಿರ್ವಹಿಸಿದರು. ಶಶಿರ್‌ ಶೆಟ್ಟಿ ಸಂಯೋಜಿಸಿದರು. ರೋಬೋಸಾಫ್ಟ್‌ನ ರೋಹಿತ್‌ ಭಟ್‌, ಕೆನರಾ ಚೇಂಬರ್ಸ್‌ ಅಧ್ಯಕ್ಷ ಆನಂದ್‌ ಜಿ. ಪೈ ಮುಂತಾದವರು ಪ್ರತಿಕ್ರಿಯಿಸಿದರು.

ಶಿರಾಡಿಘಾಟಿಯಲ್ಲಿ ರೈಲ್ವೇ-ಹೆದ್ದಾರಿ ಜತೆ ಜತೆಗೆ: ಶಿರಾಡಿಘಾಟಿಯಲ್ಲಿ ಈಗಿರುವ ಹೆದ್ದಾರಿಗೆ ಸಮಾಂತರವಾಗಿ ವಯಡಕ್ಟ್(ದೀರ್ಘ‌ ಸೇತುವೆ) ರೀತಿಯಲ್ಲಿ ಇನ್ನೆರಡು ಲೇನ್‌ ಹೆದ್ದಾರಿ ನಿರ್ಮಿಸುವ ಬಗ್ಗೆ ಯೋಜನೆಗಳು ಚರ್ಚೆ ಹಂತದಲ್ಲಿವೆ, ಇದರ ಜತೆಗೆ ರೈಲ್ವೇ ಮಾರ್ಗವನ್ನೂ ಸೇರಿಸುವಂತೆ ಸಲಹೆ ನೀಡಿದ್ದೇನೆ, ಆ ಮೂಲಕ ಘಾಟಿ ಸೆಕ್ಷನ್‌ನಲ್ಲಿ ಹೆಚ್ಚು ಸಮಯ ರೈಲ್ವೇಯಲ್ಲಿ ವ್ಯರ್ಥವಾಗುವುದಕ್ಕೆ ಕೂಡ ಪರಿಹಾರ ಸಿಗಬಹುದು ಎಂದು ಚೌಟ ಹೇಳಿದರು.

Advertisement

ಮಂಗಳೂರು-ಬೆಂಗಳೂರು ಮಧ್ಯೆ ಸಂಪರ್ಕ ಸುಧಾರಣೆವಾಗಿ ಮುಖ್ಯಮಂತ್ರಿಯವರಿಗೂ ವಿವರಿಸಿದ್ದೇನೆ, ಈ ಭಾಗದಲ್ಲಿ ಬಂದರು, ಕೈಗಾರಿಕೆಗಳ ಸುಧಾರಣೆ ಸಾಧ್ಯ, ಆ ಮೂಲಕ ರಾಜ್ಯದ ಜಿಡಿಪಿಗೆ ದೊಡ್ಡ ಕೊಡುಗೆ ಸಿಗಲಿದೆ ಎನ್ನುವುದನ್ನು ಅವರಿಗೂ ತಿಳಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next